Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿನ ಎರಡು ಸಾವಿಗೆ ಸಾಕ್ಷಿ ನುಡಿದಿತ್ತು ಬೈಕಿನ ಇಂಡಿಕೇಟರ್…!

Spread the love

ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯ ಆಕ್ಸಫರ್ಡ್ ಕಾಲೇಜಿನ ಸನಿಹದಲ್ಲಿ ಇಬ್ಬರು ಬೈಕ್ ಸವಾರರು ಸಾವಿಗೀಡಾಗಿದ್ದರು. ಅದನ್ನ ನೋಡಿದವರಿಗೆ ಇವರು ಬೈಕಿನಿಂದ ಬಿದ್ದು ಸಾವಿಗೀಡಾಗಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ, ಅದು ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಆಗಿದೆ ಎಂದು ಪೂರ್ವ ಸಂಚಾರಿ ಠಾಣೆಯ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬಾಗಲಕೋಟೆ ಮೂಲದ ಸಂತೋಷ ಮತ್ತು ಭೀಮಾನಂದ ಎಂಬಾತನ, ಮನೆಯಲ್ಲಿ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ಹೋಗಿ ಬರುವುದಾಗಿ ಬೈಕಿನಲ್ಲಿ ಬಂದಿದ್ದರು. ಆ ಸಮಯದಲ್ಲಿ ದುರ್ಘಟನೆ ನಡೆದಿತ್ತು.

ಘಟನೆಗೆ ಕಾರಣವಾಗಿದ್ದ ಚಾಲಾಕಿ ಲಾರಿ ಚಾಲಕ ಶಿವಾನಂದ ಬಂಡಿ, ಏನೂ ನಡದೇ ಇಲ್ಲವೆಂಬಂತೆ ಲಾರಿಯನ್ನ ರಿಪೇರಿ ಮಾಡಿಸಿ, ವಿಆರ್ ಎಲ್ ಕಂಪನಿಗೆ ಬಿಟ್ಟಿದ್ದ. ಚಾಣಾಕ್ಷ ಪೊಲೀಸರು ಮಾಹಿತಿಯನ್ನ ಕಲೆ ಹಾಕಿ, ಲಾರಿಯ ಸಮೇತ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿ ಪೂರ್ವ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಕಾಡದೇವರಮಠ ತಂಡ, ಯಾವುದೇ ಕುರುಹುಗಳಿಲ್ಲದ ಪ್ರಕರಣವನ್ನ ಪತ್ತೆ ಹಚ್ಚಿ, ಹಿರಿಯ ಪೊಲೀಸ್ ಅಧಿಕಾರಿಗಳಿಂದ ಶಹಬ್ಬಾಸ್ ಗಿರಿಗೆ ಒಳಗಾಗಿದ್ದಾರೆ.


Spread the love

Leave a Reply

Your email address will not be published. Required fields are marked *