Posts Slider

Karnataka Voice

Latest Kannada News

ಹುಬ್ಬಳ್ಳಿ: ಛಿದ್ರ ಛಿದ್ರವಾದ ಎರಡು ದೇಹಗಳು, ರುಂಡ ಪತ್ತೆಯಾಗದ ಸ್ಥಿತಿ…!!!!

1 min read
Spread the love

ಹುಬ್ಬಳ್ಳಿ: ಧಾರವಾಡದ ರಮ್ಯ ರೆಸಿಡೆನ್ಸಿ ಬಳಿ ಬಸ್ಸಿನಿಂದ ಇಳಿದು ಹುಬ್ಬಳ್ಳಿಯ ಚೆನ್ನಮ್ಮ ವೃತ್ತಕ್ಕೆ ಬೈಪಾಸ್ ಮೂಲಕ ಸ್ಕೂಟಿಯಲ್ಲಿ ಬರುತ್ತಿದ್ದ ಇಬ್ಬರ ಮೇಲೆ ಅಪರಿಚಿತ ವಾಹನಗಳು ಹಾಯ್ದು ಸಾವಿಗೀಡಾದ ಘಟನೆ ತಾರಿಹಾಳದ ಬಳಿ ಸಂಭವಿಸಿದ್ದು, ದೇಹಗಳು ಛಿದ್ರ ಛಿದ್ರವಾಗಿವೆ.

ಧಾರವಾಡದ ಸದಾನಂದ ದೇವಾಡಿಗ ಹಾಗೂ ಬೆಂಗಳೂರಿನ ಗೋಪಾಲಕೃಷ್ಣ ಉಪಾಧ್ಯ ಸಾವಿಗೀಡಾದ ದುರ್ಧೈವಿಗಳಾಗಿದ್ದು, ಗೋಪಾಲಕೃಷ್ಣ ಅವರು ಪಂಡರಪುರಕ್ಕೆ ಹೋಗುವಾಗ ಕಾರನ್ನ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿ ಕಾರನ್ನ ನಿಲ್ಲಿಸಿ ಹೋಗಿದ್ದರು.

ಎಕ್ಸಕ್ಲೂಸಿವ್ ವೀಡಿಯೋ…

ಸಾವಿಗೀಡಾದ ಇಬ್ಬರ ದೇಹಗಳ ರುಂಡಗಳು ಪತ್ತೆಯಾಗದ ರೀತಿಯಲ್ಲಿ ಛಿದ್ರವಾಗಿವೆ. ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿದ್ದ ದೇಹಗಳ ತುಂಡುಗಳನ್ನ ಪೊಲೀಸರು ಕ್ರೋಢೀಕರಿಸಿ ಕಿಮ್ಸಗೆ ರವಾನೆ ಮಾಡಿದ್ದಾರೆ.

ಇದೇ ಸಮಯದಲ್ಲಿ ನಿಂತಿದ್ದ ಲಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ದಕ್ಷಿಣ ಸಂಚಾರಿ ಇನ್ಸ್‌ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed