Posts Slider

Karnataka Voice

Latest Kannada News

ವಾಯುವ್ಯ ಸಾರಿಗೆಯಿಂದ ಎ.ಸಿ. ಬಸ್ ಗಳ ಸೇವೆ ಆರಂಭ

Spread the love

ಹುಬ್ಬಳ್ಳಿ: ಕೋವಿಡ್ 19 ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಎ.ಸಿ. ಬಸ್ಸುಗಳ ಕಾರ್ಯಾಚರಣೆಯನ್ನು ಸರ್ಕಾರದ ಅನುಮತಿ ಮೇರೆಗೆ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜೂನ್ 25 ರಿಂದ ಪ್ರಾರಂಭಿಸಲಿದೆ.

ಮೊದಲ ಹಂತದಲ್ಲಿ ಬೆಂಗಳೂರು ಹಾಗೂ ಮೈಸೂರು ನಗರಗಳಿಗೆ ಎ.ಸಿ. ಬಸ್ ಸೌಲಭ್ಯ ಪ್ರಾರಂಭಿಸಲಾಗಿದ್ದು, ಮಾರ್ಗಸೂಚಿಗಳ ಅನ್ವಯ 24-25 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬಸ್ ಕಾರ್ಯಚರಣೆ ನಡೆಸಲಾಗುವುದು. ಕೋವಿಡ್-19 ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆಯಾಗಿ ಬಸ್ಸುಗಳಲ್ಲಿ ಯಾವುದೇ ಹೊದಿಕೆಯನ್ನು ನೀಡುವುದಿಲ್ಲ. ಪ್ರಯಾಣಿಕರು www.ksrtc.in ಆನ್ ಲೈನ್ ಅಲ್ಲಿ ಮುಂಚಿತವಾಗಿ ಟಿಕೆಟ್ ಅನ್ನು ಮುಂಗಡವಾಗಿ ಕಾಯ್ದಿರಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


Spread the love

Leave a Reply

Your email address will not be published. Required fields are marked *