ರಾಜ್ಯದ ಮೂಲೆ ಮೂಲೆಯಲ್ಲಿ ಎಸಿಬಿ ದಾಳಿ- ಯಾರೂ.. ಹೆಂಗೆ.. ಇಲ್ಲಿದೆ ನೋಡಿ ಸಮಗ್ರ ಮಾಹಿತಿ…

ಬೆಂಗಳೂರು: ಇಂದು ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳ ಮನೆಗಳನ್ನ ಗುರುತಿಸಿ ಎಸಿಬಿ ದಾಳಿ ನಡೆದಿದ್ದು, ಚಳಿಯಲ್ಲೂ ಭ್ರಷ್ಟಾಚಾರಿ ಅಧಿಕಾರಿಗಳ ಬೆವರು ಇಳಿಸುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ರಮಗಳು ಪತ್ತೆಯಾಗಿವೆ.

ಮಂಗಳೂರು, ಉಡುಪಿ, ಬೀದರ, ಮಂಡ್ಯ, ಬಳ್ಳಾರಿ, ವಿಜಯಪುರದಲ್ಲಿ ಎಸಿಬಿ ದಾಳಿ ನಡೆದಿದ್ದು, ವಿವಿಧ ಇಲಾಖೆಯಲ್ಲಿನ ಅಧಿಕಾರಿಗಳ ಅರಮನೆಯಂತಹ ಬಂಗಲೆಗಳಲ್ಲಿ ಲೆಕ್ಕಪತ್ರ ತಪಾಸಣೆ ಆರಂಭಗೊಂಡಿದೆ.
ದಾಳಿ ನಡೆದಿರುವ ಅಧಿಕಾರಿಗಳು ಯಾರೂ ಮತ್ತು ಎಲ್ಲಿಯವರು.. ಇಲ್ಲಿದೆ ನೋಡಿ ಸಮಗ್ರ ಮಾಹಿತಿ..
1) ಜಿ.ಶ್ರೀಧರ್- ಎಕ್ಸ್ ಕ್ಯೂಟಿವ್ ಇಂಜಿನಿಯರ್ ಮಂಗಳೂರು.
2) ಕೃಷ್ಣ.ಎಸ್- ಎಕ್ಸ್ ಕ್ಯೂಟಿವ್ ಇಂಜಿನಿಯರ್ ಯಬ್ಬೂರ್ , ಕೆಆರ್ ಐಡಿಸಿಎಲ್ ಉಡುಪಿ.
3) ಹೆಚ್.ಆರ್. ಕೃಷ್ಣಪ್ಪ, ಅಸಿಸ್ಟೆಂಟ್ ಡೈರೆಕ್ಟರ್, ಹರ್ಬಲ್ ಪ್ಲಾನಿಂಗ್ ಮಾಲೂರು.
4) ಸುರೇಶ್ ಮೊಹರೆ, ಜೂನಿಯರ್ ಇಂಜಿನಿಯರ್, ರೂರಲ್ ಡೆವಲಪ್ಮೆಂಟ್ ಬೀದರ್.
5) ವೆಂಕಟೇಶ್.ಟಿ- ಡಿಸಿಎಫ್ ಸೋಷಿಯಲ್ ಫಾರೆಸ್ಟ್ ಡಿಪಾರ್ಟ್ಮೆಂಟ್ ಮಂಡ್ಯ
6) ಸಿದ್ದರಾಮ ಮಲ್ಲಿಕಾರ್ಜುನ್- ಎಇಇ ಬೆಸ್ಕಾಂ ವಿಜಯಪುರ.
8) ವಿಜಯ್ ಕುಮಾರ್- ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ಬಳ್ಳಾರಿ.