Karnataka Voice

Latest Kannada News

ಸರಕಾರಿ ಶಾಲೆಯಲ್ಲಿ ಪೇವರ್ಸ್ ಅಳವಡಿಕೆಗೆ ಹಣ ಕೇಳಿದ್ದ ‘ಮಾಸ್ತರ್ ತಮ್ಮ ಪಿಡಿಓ’- ಎಸಿಬಿ ಬಲೆಗೆ..!

Spread the love

ಧಾರವಾಡ: ಜಿಲ್ಲಾಧಿಕಾರಿ ಕಚೇರಿಯ ಸಮೀಪದಲ್ಲೇ ಗುತ್ತಿಗೆದಾರನಿಂದ ಹಣ ಪಡೆಯುತ್ತಿದ್ದ ವೇಳೆಯಲ್ಲಿ ಎಸಿಬಿ ದಾಳಿ ನಡೆದಿದ್ದು, ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಬಲೆಗೆ ಸಿಲುಕಿದ್ದಾರೆ.

ದೇವರಹುಬ್ಬಳ್ಳಿ ಗ್ರಾಮದ ಸರಕಾರಿ ಶಾಲೆಯ ಆವರಣದಲ್ಲಿ ಪೇವರ್ಸ್ ಅಳವಡಿಸಿದ್ದ ಶಿವಾಜಿ ಮಹದೇವಪ್ಪ ಆರೇರ ಎಂಬುವವರಿಗೆ ಫಾರ್ಮ್ ನಂಬರ 16 ಕೊಡಲು, ಪಿಡಿಓ 25 ಸಾವಿರ ರೂಪಾಯಿ ಲಂಚ ಕೇಳಿದ್ದರು. ಅದರ ಜೊತೆಗೆ ಸ್ಪಿಂಕ್ಲರ ಪಡೆಯಲು ಎರಡು ನೂರು ರೂಪಾಯಿಯ ಲಂಚವನ್ನ ಕೇಳಲಾಗಿತ್ತು.

25ಸಾವಿರದ ಬದಲಾಗಿ ಚೌಕಾಸಿ ಮಾಡಿದ ಮೇಲೆ 10 ಸಾವಿರ ರೂಪಾಯಿಗೆ ಒಪ್ಪಿಕೊಂಡಿದ್ದ ಪಿಡಿಓ ಮಹ್ಮದಯೂಸುಫ್ ಅಬ್ದುಲಮಜೀದ ಚಕ್ಕೋಲಿ, ಇಂದು 10200 ರೂಪಾಯಿ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಪಿಡಿಓ ಮಹ್ಮದಯೂಸುಫ್ ಚಕ್ಕೋಲಿ ಸರಕಾರಿ ಶಾಲೆಯ ಶಿಕ್ಷಕರ ಸಹೋದರನಾದರೂ ಕೂಡಾ, ಶಾಲೆಯ ಕಾಮಗಾರಿಯಲ್ಲಿ ಹಣದ ಬೇಡಿಕೆಯಿಟ್ಟಿರುವುದು ಸೋಜಿಗ ಪಡುವ ವಿಚಾರವಾಗಿದೆ.

ಇನ್ಸಪೆಕ್ಟರುಗಳಾದ ಮಂಜುನಾಥ ಹಿರೇಮಠ ಹಾಗೂ ಬಿ.ಎ.ಜಾಧವ ನೇತೃತ್ವದಲ್ಲಿ ಸಿಬ್ಬಂದಿಗಳಾದ ಜಿ.ಎಸ್.ಮನಸೂರ, ಎಸ್.ಎಸ್.ಕಾಜಗಾರ, ಎಸ್.ಐ.ಬೀಳಗಿ, ಶಿವಾನಂದ ಕೆಲವಡಿ, ಲೋಕೇಶ ಬೆಂಡಿಕಾಯಿ, ಕಾರ್ತಿಕ ಹುಯಿಲಗೋಳ, ಆರ್.ಬಿ.ಯರಗಟ್ಟಿ, ಎಸ್.ಎಸ್.ನರಗುಂದ, ಎಸ್.ವಿರೇಶ, ಗಣೇಶ ಶಿರಹಟ್ಟಿ ಟ್ರ್ಯಾಪ್ ವೇಳೆಯಲ್ಲಿ ಹಾಜರಿದ್ದರು.


Spread the love

Leave a Reply

Your email address will not be published. Required fields are marked *