ಎಸಿಬಿ ದಾಳಿಯಲ್ಲಿ ಸಿಕ್ಕಿತ್ತು ಕೋಟಿ ಕೋಟಿ ಮಾಲು: ನಮ್ಮಅಧಿಕಾರಿಗಳು ಹೆಂಗೇ ಬೆಳೆದಿದ್ದಾರೆ ನೋಡಿ ಸ್ವಾಮಿ..!
1 min readರಾಯಚೂರು: ಎಸಿಬಿ ದಾಳಿಯಲ್ಲಿ ಬಲೆಗೆ ಬಿದ್ದ ರಾಯಚೂರಿನ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಕೋಟಿ ಕೋಟಿ ಒಡೆಯ ಎಂಬುದು ತನಿಖೆ ವೇಳೆಯಲ್ಲಿ ಪತ್ತೆಯಾಗಿದೆ.
ಇಇ ಮಲ್ಲಿಕಾರ್ಜುನ್ ಗೋಪಿಶೆಟ್ಟಿಗೆ ಸೇರಿದ್ದ ಸ್ಥಳಗಳ ಮೇಲೆ ಎಸಿಬಿ ದಾಳಿ ಮಾಡಿದಾಗ ಆಸ್ತಿಯ ವಿವರ ಬಯಲಾಗಿದ್ದು, ಅವರ ಪ್ರಕಾರ ಒಂದು ಟ್ರ್ಯಾಕ್ಟರ್ ಶೋ ರೂಂ, ಒಂದು ಪೆಟ್ರೋಲ್ ಬಂಕ್, ಎರಡು ಕಾರು (ಇನ್ನೋವಾ,ಕ್ರೀಟಾ), ಬೆಂಗಳೂರಿನಲ್ಲಿ 1 ಮನೆ, 2ಪ್ಲ್ಯಾಟ್, ರಾಯಚೂರಲ್ಲಿ ಮೂರು ಮನೆ, ರಾಯಚೂರು ತಾಲೂಕಿನ ಹುಣಶ್ಯಾಲ ಹುಡಾದಲ್ಲಿ 6ಎಕರೆ ಜಮೀನು, ಒಂದು ಕೆ.ಜಿ ಬಂಗಾರ, 10ಕೆ.ಜಿ ಬೆಳ್ಳಿ ದಾಳಿ ವೇಳೆ ಪತ್ತೆಯಾಗಿದೆ.