Posts Slider

Karnataka Voice

Latest Kannada News

ಗುರುವಿಗೆ ತಕ್ಕ ಶಿಷ್ಯ: ನವೋದಯ,ಸೈನಿಕ,ಆದರ್ಶ ಪರೀಕ್ಷೆಯಲ್ಲಿ ‘ಅಮರೇ’ಶ

1 min read
Spread the love

ಬಳ್ಳಾರಿ: ಓರ್ವ ಗುರು ಮನಸ್ಸು ಮಾಡಿದರೇ ಯಾವುದೇ ಸಾಧನೆ ಸರಳವಾಗಿ ಮುಗಿದು ಹೋಗತ್ತೆ. ಆದರೆ, ಆ ಶಿಷ್ಯ ಕೂಡಾ ಗುರುವಿನ ಗುಲಾಮನಾಗಿರಬೇಕು. ಇಲ್ಲಿ ಶಿಷ್ಯ ಗುಲಾಮನಾದ ಪರಿಣಾಮವೇ ಯಾರೂ ಮಾಡದ ಸಾಧನೆಯನ್ನ ಆ ಪುಟ್ಟ ಪೋರ್ ಮಾಡಿ ಮುಗಿಸಿ, ಗುರುವು ಎದ್ದೆಯುಬ್ಬಿಸಿ ನಡೆಯುವಂತೆ ಮಾಡಿದ್ದಾನೆ. ಏನದೂ ಅಂತಾ ತಿಳಿಯಲು ಮಾಹಿತಿಯನ್ನ ಸಂಪೂರ್ಣವಾಗಿ ಓದಿ.

ಬಳ್ಳಾರಿಒ ಜಿಲ್ಲೆಯ ಸಿರಗುಪ್ಪ ತಾಲೂಕಿ ಕೋಟೆಹಾಳು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂ.ಅಮರೇಶ್ ಎಂಬ ವಿದ್ಯಾರ್ಥಿ 6ನೇ ತರಗತಿ ಉಚಿತ ಪ್ರವೇಶಕ್ಕಾಗಿ ನಡೆಯುವ ಮೂರೂ ಪರೀಕ್ಷೆಗಳಲ್ಲಿ ಆಯ್ಕೆಯಾಗಿದ್ದಾನೆ. ನವೋದಯ, ಆದರ್ಶ ಮತ್ತು ಸೈನಿಕ ಪರೀಕ್ಷೆಗಳಲ್ಲಿ ಆಯ್ಕೆಯಾಗಿ ಎಲ್ಲರ ಮೆಚ್ಚುಗೆ ಗಳಿಸಿದ್ದಾನೆ. ಸಾಧನೆ ಮಾಡಿದ ಅಮರೇಶನ ತಂದೆ ಎಂ.ರಾಜಶೇಖರ್ ಮೂಲತಃ ಕೃಷಿಕರಾಗಿದ್ದರೂ ಮಗುವಿಗೆ ಪ್ರೋತ್ಸಾಹ ಕೊಡುತ್ತಲೇ ಬಂದಿದ್ದರು.

ಈ ಶಾಲೆಯ ಏಕೋಪಾಧ್ಯಾಯ ಶಿಕ್ಷಕ ಸಿ.ಆರ್.ಸುರೇಶ್ ಪಟ್ಟ ಪರಿಶ್ರಮ ಇದಕ್ಕೆಲ್ಲ ಕಾರಣವೆಂದು ಎಸ್ ಡಿಎಂಸಿ ಅಧ್ಯಕ್ಷ ಮಂಜುನಾಥ್ ಹಾಗೂ ಉಪಾಧ್ಯಕ್ಷೆ ಸುನೀತಾ ಹೇಳಿ, ಅಭಿನಂದನೆ ತಿಳಿಸಿದ್ದಾರೆ.

ಅಮರೇಶನ ಪ್ರತಿಯೊಂದು ಸಮಸ್ಯೆಗೆ ತಕ್ಷಣವೇ ಅವನಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡುತ್ತಿದ್ದ ಶಿಕ್ಷಕ ಸುರೇಶ ಕೂಡಾ ಇನ್ನುಳಿದ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed