Posts Slider

Karnataka Voice

Latest Kannada News

ಹುಬ್ಬಳ್ಳಿ: “93” ಬ್ಯಾಚಿನ ಪಾಟೀಲ ಇನ್ನಿಲ್ಲ: ಕುಟುಂಬದ ನೋವು

Spread the love

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್.ಎಸ್.ಪಾಟೀಲ ಅನಾರೋಗ್ಯದಿಂದ ಇಂದು ಸಾವಿಗೀಡಾಗಿದ್ದು, ಹುಬ್ಬಳ್ಳಿ-ಧಾರವಾಡ ಹಳೇಯ ಬ್ಯಾಚಿನ ಕೊಂಡಿಯೊಂದು ಕಳಚಿಹೋಗಿದೆ.

1993 ಬ್ಯಾಚಿನ ಆರ್.ಎಸ್.ಪಾಟೀಲ ಹಲವು ದಿನಗಳಿಂದ ಆರೋಗ್ಯದಲ್ಲಿ ಏರುಪೇರಾಗಿದ್ದರು, ಸಿಕ್ ಲೀವ್ ಪಡೆದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಸುಧಾರಣೆಯಾಗದೇ ಇಂದು ನಿಧನರಾಗಿದ್ದು, ಕುಟುಂಬಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.

ಆರ್.ಎಸ್.ಪಾಟೀಲ ತಮ್ಮ ಬ್ಯಾಚಿನ ಹಲವರೊಂದಿಗೆ ಒಳ್ಳೆಯ ಸಂಬಂಧಯಿಟ್ಟುಕೊಂಡು ಸೇವೆ ಸಲ್ಲಿಸುತ್ತ ಬಂದಿದ್ದರು. ಯಾವುದೇ ರೀತಿಯ ಸಮಯದಲ್ಲೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಇವರ ಅಗಲಿಕೆ ಪೊಲೀಸ್ ಇಲಾಖೆಯಲ್ಲೂ ಬೇಸರ ಮೂಡಿಸಿದೆ.


Spread the love

Leave a Reply

Your email address will not be published. Required fields are marked *