ಗಜೇಂದ್ರಗಡದಲ್ಲಿ ಅಂಜುಮನ್ ಸಂಸ್ಥೆಯ ಶಿಕ್ಷಣ ಪ್ರೇಮ: ಸರಕಾರಿ ಶಾಲೆಗಾಗಿ ನಿರಂತರ ನಡಿಗೆ
1 min readಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಅಂಜುಮನ್ ಸಂಸ್ಥೆಯು ಸರಕಾರಿ ಶಾಲೆಗಳ ಉಳಿವಿಗಾಗಿ ಹಗಲಿರುಳು ಪ್ರಯತ್ನ ನಡೆಸಿದ್ದು, ಕೊರೋನಾ ಸಮಯದಲ್ಲೂ ಮನೆ ಮನೆಗೆ ಹೋಗಿ ವಿದ್ಯಾರ್ಥಿಗಳನ್ನ ಸರಕಾರಿ ಶಾಲೆಗೆ ಕಳಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಸರಕಾರಿ ಉರ್ದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎ.ಡಿ.ಕೋಲ್ಕಾರ, ಕಾರ್ಯದರ್ಶಿ ಮಸ್ಸೂಮ್ ಅಲಿ ಮದಗಾರ, ಶಮ್ಮೀದಸಾಬ ದಿಂಡವಾಡ, ದಾದುಸಾಬ ಹಣಗಿ, ಯೂಸುಫ ಅತ್ತಾರ, ಅಬ್ದುಲಸಾಬ ಕಾತ್ರಕಿ, ಮೆಹಬೂಬ ತಟಗಾರ ಸೇರಿದಂತೆ ಸಂಸ್ಥೆಯ ಹಲವರು ಸೇರಿಕೊಂಡು ಶಿಕ್ಷಕರು ಹಾಗೂ ಎಸ್ ಡಿಎಂಸಿಯವರಿಗೆ ಸಾಥ್ ನೀಡುತ್ತಿದ್ದಾರೆ.
ಕೊರೋನಾ ಸಮಯದಲ್ಲಿಯೂ ಮನೆ ಮನೆಗೆ ಹೋಗಿ ಪಾಲಕರ ಮನವೊಲಿಸಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನ ಕಳಿಸಿ ಎಂದು ಕೇಳಿಕೊಳ್ಳುತ್ತಿರುವುದು ಅಂಜುಮನ್ ಸಂಸ್ಥೆ ಶಿಕ್ಷಣದ ಬಗ್ಗೆ ಹೊಂದಿರುವ ಆಸಕ್ತಿಯನ್ನ ಬಿಂಬಿಸುತ್ತಿದೆ.
ಅಂಜುಮನ್ ಸಂಸ್ಥೆಯು ಪಾಲಕರನ್ನ ಪ್ರತಿದಿನವೂ ಭೇಟಿಯಾಗಿ ಹೇಳುತ್ತಿರುವುದರಿಂದ ಶಾಲೆಗಳಲ್ಲಿ ಹೊಸ ವಿದ್ಯಾರ್ಥಿಗಳ ನೋಂದಣಿಯಾಗತೊಡಗಿದೆ. ಸರಕಾರಿ ಶಾಲೆಯ ಇವರ ಪ್ರೀತಿ ಹೀಗೆ ಮುಂದುವರೆಯಲಿ..