ಧಾರವಾಡದಲ್ಲಿ ಮನೆಗಳ್ಳನ ಬಂಧನ: ಬೆಳ್ಳಿ-ಬಂಗಾರ ವಶ
1 min readಧಾರವಾಡ: ಹೊಸಯಲ್ಲಾಪೂರ ಶುಕ್ರವಾರಪೇಟೆ ಜೋಶಿಗಲ್ಲಿಯ ಮನೆಯನ್ನ ಕಳ್ಳತನ ಮಾಡಿದ್ದ ಆರೋಪಿಯನ್ನ ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕಾಶ ಇಂಗಳೆ ಎಂಬುವವರು ತಾಯಿಯ ತವರು ಮನೆಗೆ ಹೋದಾಗ ಕಬ್ಬಿಣದ ರಾಡಿನಿಂದ ಮನೆಯ ಬೀಗ ಮುರಿದು ಒಳನುಗ್ಗಿದ್ದ ಆರೋಪಿ ಬೆಳ್ಳಿ-ಬಂಗಾರ ಮತ್ತು ನಗದನ್ನ ದೋಚಿ ಪರಾರಿಯಾಗಿದ್ದ. ಈ ಬಗ್ಗೆ ತನಿಖೆ ನಡೆಸಿದ ಶಹರ ಠಾಣೆಯ ಪೊಲೀಸರು ಲಕ್ಷ್ಮೀಸಿಂಗನಕೇರಿಯ ಮಂಜುನಾಥ ಅರ್ಜುನ ಹುಲ್ಲೂರ ಎಂಬಾತನನ್ನ ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ 15 ಗ್ರಾಂ ಬಂಗಾರ ಮತ್ತು 270 ಗ್ರಾಂ ಬೆಳ್ಳಿಯ ಸಾಮಾನುಗಳನ್ನ ವಶಕ್ಕೆ ಪಡೆದಿದ್ದಾರೆ. ಇವುಗಳ ಮೊತ್ತ 66000 ರೂಪಾಯಿ ಎಂದು ಅಂದಾಜಿಸಲಾಗಿದೆ.
ಧಾರವಾಡ ಶಹರ ಠಾಣೆಯ ಪೊಲೀಸ ಸಬ್ ಇನ್ಸಪೆಕ್ಟರ ಎಲ್.ಕೆ.ಕೊಡಬಾಳ, ಎಎಸ್ಐಗಳಾದ ಎಂ.ವಾಯ್.ಕುರ್ತಕೋಟಿ, ಪಿ.ಬಿ.ಕಾಳೆ ಮತ್ತು ಸಿಬ್ಬಂದಿಗಳಾದ ಬಿ.ಎಚ್.ಶಿಂಗಣ್ಣವರ, ಎನ್.ಓ.ಜಾಧವ, ಜಿ.ಜಿ.ಚಿಕ್ಕಮಠ, ಕೆ.ಎ.ಕೊಪ್ಪಳ, ವಿ.ಪಿ.ಕಿಲ್ಲೇದಾರ, ಎಸ್.ಸಿ.ಪಾಟೀಲ, ಯು.ಎನ್.ಸಣ್ಣಿಂಗನವರ, ಡಿ.ವಾಯ್.ಮನ್ನಿಕೇರಿ, ಎಲ್.ಎಸ್.ಲಮಾಣಿ, ಪರಮೇಶ್ವರ ಕುರಿ, ಮಾರುತಿ ಬಡವಣ್ಣವರ, ಗುರುನಾಥ ಚಂದರಗಿ ಆರೋಪಿಯನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.