Posts Slider

Karnataka Voice

Latest Kannada News

ಪೈರ್ ಎನ್ ಓಸಿಗೆ ಲಂಚ-ಅಗ್ನಿಶಾಮಕ ಪ್ರಾದೇಶಿಕ ಅಧಿಕಾರಿ ಎಸಿಬಿ ಬಲೆಗೆ

Spread the love

ಕಲಬುರಗಿ: ಕೊರೋನಾ ಪಾಸಿಟಿವ್ ಹೆಚ್ಚಾಗುತ್ತಿರುವ ಸಮಯದಲ್ಲೂ ಲಂಚಾವತಾರದ ವಿರೂಪಗಳು ಪತ್ತೆಯಾಗುತ್ತಲೇ ಇವೆ. ಇದೀಗ ಪೈರ್ ಎನ್ಓಸಿ ಕೊಡಲು ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ಹೊಸ ಕಾಲೇಜು ಪ್ರಾರಂಭಿಸಲು ಪೈರ್ ಎನ್ಓಸಿ ಪಡೆಯಲು ಮುಂದೆ ಬಂದಿದ್ದ ನಾಗರಾಜ ಅನ್ನೋರಿಗೆ 75 ಸಾವಿರ ರೂಪಾಯಿ ಲಂಚ ಕೇಳಿದ್ದ, ಕಲಬುರಗಿ ವಿಭಾಗದ ಅಗ್ನಿಶಾಮಕ ಪ್ರಾದೇಶಿಕ ಅಧಿಕಾರಿ ಲಕ್ಕಪ್ಪ ಇದೀಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕಲಬುರಗಿ ನಗರದಲ್ಲಿರುವ ಅಗ್ನಿಶಾಮಕ ಕಚೇರಿಯಲ್ಲೇ ಪ್ರಾದೇಶಿಕ ಅಧಿಕಾರಿ ಲಕ್ಕಪ್ಪ ಲಂಚ ಪಡೆಯುವಾಗ ಎಸಿಬಿ ಬಲೆಯಲ್ಲಿ ಸಿಕ್ಕು ಬಿದ್ದಿದ್ದಾರೆ. ನಾಗರಾಜರಿಂದ ಹಣ ಪಡೆದು ಎಣಿಸುತ್ತಿದ್ದಾಗಲೇ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಹಣದ ಸಮೇತ ಸಿಕ್ಕಿಬಿದ್ದಿದ್ದು ಮುಂದಿನ ತನಿಖೆಯನ್ನ ಎಸಿಬಿ ಅಧಿಕಾರಿಗಳು ನಡೆಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *