Posts Slider

Karnataka Voice

Latest Kannada News

ನವೆಂಬರನಲ್ಲಿ SSLC-PUC ಆರಂಭಿಸಿ: ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ

Spread the love

ಧಾರವಾಡ: ಶಾಲೆ-ಕಾಲೇಜುಗಳನ್ನ ಆರಂಭಿಸಬೇಕೋ ಬೇಡವೋ ಎಂಬ ನೂರೆಂಟು ಗೊಂದಲಗಳಿರುವಾಗ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ನವೆಂಬರನಲ್ಲಿ ಶಾಲೆ-ಕಾಲೇಜು ಆರಂಭಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಪ್ರಾಯೋಗಿಕವಾಗಿ ನವೆಂಬರ್ 2ರಿಂದ ಹತ್ತನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ಮುನ್ನಚ್ಚರಿಕೆ ಕ್ರಮವನ್ನ ತೆಗೆದುಕೊಂಡು ಶಿಕ್ಷಣ ನೀಡಲು ಮುಂದಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನ ನೋಡಿಕೊಂಡು ಹಂತ ಹಂತವಾಗಿ ಮುಂದಿನದ್ದರ ಬಗ್ಗೆ ಸಮಾಲೋಚನೆ ಮಾಡಬಹುದೆಂದು ಜಡಿ ಹೇಳಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಡಿಯವರು, ರಾಜ್ಯ ಸರಕಾರದಲ್ಲಿ ಹಿರಿಯ ರಾಜಕಾರಣಿಗಳು ಶಿಕ್ಷಣ ಮಂತ್ರಿಗಳಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದ  ರೀತಿಯಲ್ಲಿ ಕ್ರಮವನ್ನ ಜರುಗಿಸುತ್ತಾರೆ ಎಂಬ ಭರವಸೆಯನ್ನ ವ್ಯಕ್ತಪಡಿಸಿದ್ದಾರೆ.

SSLU- PUC ಆರಂಭಿಸುವುದು ಸೂಕ್ತ. ಈ ಥರದ ಕ್ರಮವನ್ನ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿಗಳನ್ನ ಈರಣ್ಣ ಜಡಿ ಕೇಳಿಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *