ಶಾಲೆಗಳ ಆರಂಭ ಇಂದಿನಿಂದ ಮಹತ್ವದ ಸಭೆ ಆರಂಭ- 6ಕ್ಕೆ ನಿರ್ಧಾರ ಪ್ರಕಟ
1 min readಬೆಂಗಳೂರು: ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನ ಆರಂಭಿಸುವ ಕುರಿತು ಇಂದಿನಿಂದ ಮೂರು ದಿನಗಳ ಸಭೆ ನಡೆಯಲಿದ್ದು, ವಿವಿಧ ಸ್ತರದಲ್ಲಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆಯಲ್ಲಿ ಇದೇ ತಿಂಗಳ ನವೆಂಬರ್ 6ರಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಪೋಷಕರು ಹಾಗೂ ಪ್ರತಿ ಜಿಲ್ಲೆಯ ಉಪನಿರ್ದೇಶಕರ ಜೊತೆ ಮಾತನಾಡಲಿದ್ದಾರೆ. ಈಗಾಗಲೇ ಪದವಿ ಕಾಲೇಜುಗಳನ್ನ ಆರಂಭಿಸಲು ದಿನಾಂಕವನ್ನ ನಿಗದಿ ಮಾಡಲಾಗಿದೆ. ಹೀಗಾಗಿ ಪದವಿ ಪೂರ್ವ ಮತ್ತು ಪ್ರಾಥಮಿಕ, ಪ್ರೌಢಶಾಲೆಗಳ ಬಗ್ಗೆಯೂ ಚಿಂತನೆ ನಡೆಯುತ್ತಿದೆ.
ಶಾಲೆಗಳು ಬಂದ್ ಆಗಿ ಈಗಾಗಲೇ ಏಳು ತಿಂಗಳು ಕಳೆದಿದ್ದು, ಶಾಲಾ ಕಟ್ಟಡಗಳ ಸ್ಥಿತಿ, ಕೋಣೆಗಳ ದುರಸ್ತಿ, ನೀರು ಹಾಗೂ ಇನ್ನಿತರ ವ್ಯವಸ್ಥೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈಗಾಗಲೇ ಹಲವು ಪೋಷಕರು ಶಾಲೆಗಳನ್ನ ಆರಂಭಿಸುವಂತೆ ಮುಂದೆ ಬಂದಿರುವುದರಿಂದ ಸರಕಾರ, ಶಾಲೆಗಳನ್ನ ಆರಂಭಿಸುವ ಬಗ್ಗೆ ಚಿಂತನೆ ಆರಂಭಿಸಿದೆ.
ಶಿಕ್ಷಣ ಸಚಿವ ಸುರೇಶಕುಮಾರ, ಉಪನಿರ್ದೇಶಕರ ಜೊತೆ ಹಾಗೂ ಪಾಲಕರ ಜೊತೆ ಮಾತಾಡುವ ಜೊತೆ ಜೊತೆಗೆ ಶಿಕ್ಷಕ ಸಂಘಟನೆಗಳ ಅಭಿಪ್ರಾಯವನ್ನೂ ಪಡೆಯುವುದು ಒಳ್ಳೆಯದೆಂಬ ಅಭಿಪ್ರಾಯ ಬರುತ್ತಿದೆ. ಮೂರು ದಿನಗಳಲ್ಲಿ ಶಿಕ್ಷಕರ ಅಭಿಪ್ರಾಯಗಳನ್ನ ಕ್ರೋಡಿಸಿಕರಿಸಿದರೇ, ಶಾಲೆಗಳ ಆರಂಭಕ್ಕೆ ಮತ್ತಷ್ಟು ಅನುಕೂಲವಾಗಬಹುದು.