Posts Slider

Karnataka Voice

Latest Kannada News

ತನಗೆ ಗಂಡು ಮಗು ಹುಟ್ಟಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

Spread the love

ಹುಬ್ಬಳ್ಳಿ: ತನಗೆ ನಿರಂತರವಾಗಿ ನಾಲ್ಕು ಜನ ಹೆಣ್ಣು ಮಕ್ಕಳು ಹುಟ್ಟಿವೆ ಎಂದು ಬೇಸರಗೊಂಡ ವ್ಯಕ್ತಿಯೋರ್ವ  ಸಾರಾಯಿ ಕುಡಿದ ನಶೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾರಿಹಾಳ ಗ್ರಾಮದಲ್ಲಿ ನಡೆದಿದೆ.

ತಾರಿಹಾಳ ಗ್ರಾಮದ ದಾವಲಸಾಬ ಪೆಂಡಾರಿ ಎಂಬ 48 ವರ್ಷದ ವ್ಯಕ್ತಿಯೇ ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆಯಲ್ಲಿ, ಯಾರಿಗೂ ಗೊತ್ತಾಗದ ಹಾಗೇ ತಾನು ನೇಣಿಗೆ ಶರಣಾಗಿದ್ದಾನೆ. ತನಗೊಂದು ಗಂಡು ಮಗು ಹುಟ್ಟಿದ್ದರೇ ಚೆನ್ನಾಗಿರುತ್ತೆಂದು ಎಲ್ಲರ ಮುಂದೆ ಹೇಳಿಕೊಳ್ಳುತ್ತಿದ್ದನಂತೆ.

ವೃತ್ತಿಯಲ್ಲಿ ಕೂಲಿ ಕೆಲಸವನ್ನು ಮಾಡುತ್ತಿದ್ದ ದಾವಲಸಾಬಗೇ ನಾಲ್ಕು ಜನ ಹೆಣ್ಣು ಮಕ್ಕಳು ಹುಟ್ಟಿದ್ದಾರೆ. ಇದನ್ನ ಮನಸ್ಸಿಗೆ ಹಚ್ಚಿಕೊಂಡು ಇತ್ತೀಚಿಗೆ ಸಾರಾಯಿಯ ದಾಸನಾಗಿದ್ದ. ಈ ಚಿಂತೆಯನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ವಿಷಯವಾಗಿ ಹಲವರು ದಾವಲಸಾಬನಿಗೆ ತಿಳುವಳಿಕೆ ನೀಡಿದರೂ ಕೂಡಾ ಕುಡಿತದಿಂದ ಹೊರಗೆ ಬರಲು ಆತನಿಗೆ ಆಗಿರಲಿಲ್ಲ. ಘಟನೆಯ ನಂತರ ಸ್ಥಳಕ್ಕೆ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *