Posts Slider

Karnataka Voice

Latest Kannada News

ಸರಕಾರಿ ಶಾಲೆಗೆ ದೀಢಿರ್ ಭೇಟಿ ನೀಡಿದ ಶಿಕ್ಷಣ ಸಚಿವ: ಮುಂದೇನಾಯಿತು ತಿಳಿಬೇಕಾ..!

Spread the love

ಶಿವಮೊಗ್ಗ: ಶಿಕ್ಷಣ ಸಚಿವ ಸುರೇಶಕುಮಾರ ಇಂದು ದಿಢೀರನೇ ಸರಕಾರಿ ಶಾಲೆಗೆ ಭೇಟಿ ನೀಡಿ, ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೆ ಶಾಕ್ ಮೂಡಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿಯೇ ಉನ್ನತೀಕರಣವಾಗಿರುವ  ದುರ್ಗಿಗುಡಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸಚಿವರು ಭೇಟಿ ನೀಡಿದರು.

ಸಚಿವರು ಮಾತಿನ ವೀಡಿಯೋ

ಭೇಟಿಯ ಸಮಯದಲ್ಲಿ ಸ್ಮಾರ್ಟ್ ಕ್ಲಾಸ್ ನಡೆಯುವ ಕೊಠಡಿಯಲ್ಲಿ ಮಕ್ಕಳೊಂದಿಗೆ ಮಾತಾಡಿದ ಸಚಿವ ಸುರೇಶಕುಮಾರ, ಪರೀಕ್ಷೆ ಮುಗಿದ ಮೇಲೆ ನಿಮ್ಮ ಶಾಲೆಗೆ ಬರುತ್ತೇನೆ. ಎಲ್ಲರೂ ಚೆನ್ನಾಗಿ ಅಭ್ಯಾಸ ಮಾಡಿ, ಮುಂದುವರೆಯಬೇಕೆಂದು ಹೇಳಿದರು.

ವಿದ್ಯಾಗಮಯ-2 ಆರಂಭವಾದ ಮೇಲೆ ಶಾಲೆಗಳಿಗೆ ಭೇಟಿ ನೀಡಬೇಕೆಂಬ ಕಾರಣದಿಂದ ಸಡನ್ನಾಗಿ ಭೇಟಿ ನೀಡಿದ ಸಚಿವರು, ಮಕ್ಕಳ ಜಾಗೃತೆಗಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಶಿಕ್ಷಕರಿಂದ ಮಾಹಿತಿಯನ್ನ ಪಡೆದರು.

ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರದ ಬಗ್ಗೆಯೂ ಹಲವು ಸೂಚನೆಗಳನ್ನ ಸಚಿವರು ಶಿಕ್ಷಕರಿಗೆ ನೀಡಿದರು. ಸಚಿವರ ಅಚಾನಕ್ ಭೇಟಿಯಿಂದ ಸಿಬ್ಬಂದಿಗಳು ಅತ್ತಿಂದಿತ್ತ ಅಲೆದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಶಾಲೆಯ ಪ್ರಮುಖರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *