ಹಣೆಬರಹ “Destiny” ಮುಂದೆ ಮಾತಾಡ್ತೇನಿ: ಶಾಸಕ ವಿನಯ ಕುಲಕರ್ಣಿ ಧಾರವಾಡದ ನಿವಾಸದಲ್ಲಿ ಹೇಳಿಕೆ…
ಕ್ಷೇತ್ರದಲ್ಲಿ ಹಲವು ಕೆಲಸಗಳು ಆಗಿದ್ದು, ಇನ್ನೂ ಮಾಡಬೇಕಿದೆ. ಈಗ ಸಿಕ್ಕಿರುವ ಅವಕಾಶವನ್ನ ಎಲ್ಲರೊಂದಿಗೆ ಬೆರೆತು ಮಾಡುತ್ತೇನೆ. ಹಣೆಬರಹದಲ್ಲಿ ಬರೆದದ್ದು ನಡೆಯತ್ತೆ ಎಂದು ಶಾಸಕ ವಿನಯ ಕುಲಕರ್ಣಿ ತಮ್ಮ ನಿವಾಸದಲ್ಲಿ ಹೇಳಿದರು. Desti
ಧಾರವಾಡ: ಹೈಕೋರ್ಟ್ನಿಂದ ಜಾಮೀನು ಹಾಗೂ ಧಾರವಾಡ ಪ್ರವೇಶಕ್ಕೆ ಅನುಮತಿ ದೊರೆತ ಬಳಿಕ ಸುಮಾರು ಆರು ವರ್ಷಗಳ ನಂತರ ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ಅವರು ಧಾರವಾಡಕ್ಕೆ ಆಗಮಿಸಿದರು.
ನಗರದ ಮೂರುಘಾ ಮಠಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ಜನರು ಹಾಗೂ ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಿದರು. ಈ ವೇಳೆ ಅಪಾರ ಸಂಖ್ಯೆಯ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಮಹಿಳಾ ಕಾರ್ಯಕರ್ತರು ವಿನಯ್ ಕುಲಕರ್ಣಿ ಅವರಿಗೆ ರಾಖಿ ಕಟ್ಟಿ, ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ಬಳಿಕ ಮೂರುಘಾ ಮಠದ ಶಾಲೆಯ ಕಾಮಗಾರಿ ವೀಕ್ಷಿಸಿದರು.
ವರ್ಷಗಳ ಬಳಿಕ ತವರು ಕ್ಷೇತ್ರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿತ್ತು.
