Karnataka Voice

Latest Kannada News

ಲವರ್ ಜೊತೆ ತಾಳಿ ಕಟ್ಟಿದವನನ್ನ ಮುಗಿಸಿ “ಕುರಿ ಕಾಯೋಕೆ ಊರಿಗೆ ಹೋಗಿದ್ದಾನೆ” ಅಂದಿದ್ದ ಬಂಗಾರಿ…

Spread the love

ಬೆಳಗಾವಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿ, ಆತ ಬೇರೆ ಜಿಲ್ಲೆಗೆ ಹೋಗಿದ್ದಾನೆ ಎಂದು ಆರು ತಿಂಗಳು ನಾಟಕವಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದ ರಾಘು ಗಾವಡೆ (40) ಕೊಲೆಯಾದವರು. ಪತ್ನಿ ಬಂಗಾರಿ ಗಾವಡೆ ಹಾಗೂ ಆಕೆಯ ಪ್ರಿಯಕರ ರಾಮಾ ರಾಣಗೆ ಬಂಧಿತ ಆರೋಪಿಗಳು. ರಾಮಾ, ಮೃತ ರಾಘುವಿನ ಸಂಬಂಧಿ ಎನ್ನಲಾಗಿದೆ.
ಪತಿಯನ್ನು ಹೊಲಕ್ಕೆ ಕರೆಸಿ ಕೊಲೆ ಮಾಡಿ ಶವವನ್ನು ಹೂತು ಹಾಕಿದ್ದರೆನ್ನಲಾಗಿದೆ. ಬಳಿಕ ಗಂಡ ಬೇರೆ ಜಿಲ್ಲೆಗೆ ಹೋಗಿದ್ದಾನೆ ಎಂದು ಬಂಗಾರಿ ಕಥೆ ಕಟ್ಟಿದ್ದಳು. ರಾಘು ಕಾಣೆಯಾಗಿರುವ ಬಗ್ಗೆ ಸಹೋದರ ಲಗಮಣ್ಣಗೆ ಅನುಮಾನ ಮೂಡಿದ್ದು, ಗ್ರಾಮದ ಹಿರಿಯರ ವಿಚಾರಣೆಯಲ್ಲಿ ಪ್ರಕರಣ ಬಯಲಾಗಿದೆ.
ಈ ಕುರಿತು ದೂರು ದಾಖಲಿಸಿಕೊಂಡಿರುವ ಖಡಕಲಾಟ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.


Spread the love

Leave a Reply

Your email address will not be published. Required fields are marked *