ಧಾರವಾಡ ಶಹರ ಠಾಣೆ ಪೊಲೀಸರ ಕಾರ್ಯಾಚರಣೆ: ಮನೆ, ಗುಡಿ ಕಳ್ಳನ ಬಂಧನ…
ಮನೆ ಕಳ್ಳತನ ಪ್ರಕರಣ ಭೇದಿಸಿದ ಧಾರವಾಡ ಶಹರ ಪೊಲೀಸರು
ಆರೋಪಿತನ ಬಂಧನ; ₹5.38 ಲಕ್ಷ ಮೌಲ್ಯದ ಮಾಲು ವಶ
ಧಾರವಾಡ: ಧಾರವಾಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಹಾಗೂ ಗುಡಿ ಕಳ್ಳತನ ಸೇರಿದಂತೆ ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿತನನ್ನು ಬಂಧಿಸಿದ್ದಾರೆ.
ಬಂಧಿತನಿಂದ ₹5,04,000 ನಗದು, 42 ಗ್ರಾಂ ಬಂಗಾರದ ಆಭರಣ, 20 ಗ್ರಾಂ ಬೆಳ್ಳಿಯ ಆಭರಣ ಹಾಗೂ ಒಂದು ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ₹5,38,500 ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ತನಿಖೆಯನ್ನು ಧಾರವಾಡ ಶಹರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗುರುನಾಥ ಚವ್ಹಾಣ, ಪಿ.ಎಸ್.ಐ ಆರ್.ಎನ್. ನದಾಫ್ ಹಾಗೂ ಸಿಬ್ಬಂದಿ ಜಿ.ಜಿ. ಚಿಕ್ಕವರ್, ಇ.ಪಿ. ಬುಜರ್, ಆರ್.ಎಸ್. ಪಾಟೀಲ್, ಡಿ.ಕೆ. ನದಾಫ್, ಪ್ರವೀಣ ತಿರ್ಲಾಪುರ, ಸಂತೋಷ ಮುಜಾದಾರ, ಬಿ.ಎಲ್. ಹಡಪದ, ಎಂ.ಆರ್. ಜ್ಯಾಳಿ, ಎಂ.ಎಸ್. ಗೋಮವ್ವನವರ ಹಾಗೂ ಆರ್.ಎಸ್. ಗೋಮವ್ವನವರ ಅವರನ್ನೊಳಗೊಂಡ ತಂಡ ಕೈಗೊಂಡಿತ್ತು.
ತಾಂತ್ರಿಕ ವಿಧಾನ ಹಾಗೂ ತನಿಖೆಯ ಮೂಲಕ ಆರೋಪಿತನನ್ನು ಪತ್ತೆಹಚ್ಚಿ, ಕಳ್ಳತನದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
