ಮಾರಡಗಿಯಲ್ಲಿ ಅವಘಡ: ರಸ್ತೆಯಲ್ಲೆ ಕೊನೆಯುಸಿರೆಳೆದ ಹಿರಿಯ ಜೀವ…
ಧಾರವಾಡ: ಎಕ್ಸೈಲ್ ವಾಹನದಲ್ಲಿ ಹೊರಟಿದ್ದ ವೃದ್ಧರೋರ್ವರು ರಸ್ತೆಯಲ್ಲಿ ಬಿದ್ದು ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದು, ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಮಾರಡಗಿ ಗ್ರಾಮದ ಶೇಖಣ್ಣ ನಡಕಿನಮನಿ ಉರ್ಫ್ ಬಳ್ಳಾರಿ ಎಂಬುವವರೇ ಸಾವಿಗೀಡಾದ ದುರ್ದೈವಿಯಾಗಿದ್ದಾರೆ. ಹೊಲದಿಂದ ಬಂದ ಸಮಯದಲ್ಲಿ ದುರ್ಘಟನೆ ನಡೆದಿದೆ. ಕೆಲವರ ಪ್ರಕಾರ ಯಾವುದೋ ವಾಹನ ಇವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಕೆಲವರು ಜೆಸಿಬಿ ಡಿಕ್ಕಿ ಹೊಡೆದಿದೆ ಎಂದು ಹೇಳುತ್ತಿದ್ದಾರೆ. ಆದರೆ, ನಿಖರವಾದ ಮಾಹಿತಿ ಲಭಿಸಿಲ್ಲ. ಘಟನೆಯ ಕುರಿತು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
