Karnataka Voice

Latest Kannada News

ತಾಯಿ-ಮಡದಿಯನ್ನ ನೋಡಿಕೊಳ್ಳುತ್ತಿದ್ದ ಮಗ “ಈರಣ್ಣ” 500 ರೂ.ಗಾಗಿ ಹತ್ಯೆ- ಹುಬ್ಬಳ್ಳಿಯನ್ನ ಬೆಚ್ಚಿಬೀಳಿಸಿದ ಘಟನೆ…

Spread the love

ತಾಯಿ ವಿಜಯಲಕ್ಷ್ಮಿ ಮಡದಿ ಭಾಗ್ಯಶ್ರೀ ಇಬ್ಬರಿಗೂ ಘಟನೆಯ ಬಗ್ಗೆ ಮಾಹಿತಿಯೇ ಇಲ್ಲ. ಈ ಇಬ್ಬರನ್ನೂ ಕೊನೆಯುಸಿರೆಳೆದ ಈರಣ್ಣ ನೋಡಿಕೊಳ್ಳುತ್ತಿದ್ದನಂತೆ

ಹುಬ್ಬಳ್ಳಿ: ಕೇವಲ ₹500 ಸಾಲದ ಹಣದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಆಟೋ ಚಾಲಕರೊಬ್ಬರನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

​ನಗರದ ಯಲ್ಲಾಪುರ ಓಣಿಯ ನಿವಾಸಿ, ಆಟೋ ಚಾಲಕ ಈರಣ್ಣ ಹುರಕಡ್ಲಿ (45) ಕೊಲೆಯಾದ ದುರ್ದೈವಿಯಾಗಿದ್ದಾನೆ. ಮೃತ ಈರಣ್ಣ ಅವರು ಆರೋಪಿ ಶಶಿಧರ್ ಎಂಬಾತನಿಂದ ₹500 ಸಾಲ ಪಡೆದಿದ್ದರು ಎನ್ನಲಾಗಿದೆ. ಜೂನ್ 25ರಂದು ಈ ಹಣದ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಆಕ್ರೋಶಗೊಂಡ ಶಶಿಧರ್ ಕಲ್ಲಿನಿಂದ ಈರಣ್ಣ ಅವರ ಮೇಲೆ ಹಲ್ಲೆ ನಡೆಸಿದ್ದನು.

​ಗಂಭೀರವಾಗಿ ಗಾಯಗೊಂಡಿದ್ದ ಈರಣ್ಣ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ.

​ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಶಶಿಧರ್‌ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


Spread the love

Leave a Reply

Your email address will not be published. Required fields are marked *