ಹುಬ್ಬಳ್ಳಿಯ ತಾರಿಹಾಳದಿಂದ ತೆರಳಿ ಅಕ್ಕನನ್ನ ಮುಗಿಸಿದ ಕಿರಾತಕ ತಮ್ಮ ಸಂಜು… ಹಿಡಿದು ಪೊಲೀಸರಿಗೊಪ್ಪಿಸಿದ ಪಬ್ಲಿಕ್…
ಅಂಗನವಾಡಿಯಲ್ಲೇ ಹಂತಕನ ಕರಾಳತೆ
ಅಕ್ಕನ ಶವದ ಮುಂದೆ ನಗುತ್ತಲೇ ಕುಳಿತ ರಕ್ಕಸ
ಹಾವೇರಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ತನ್ನ ಒಡಹುಟ್ಟಿದ ಸಹೋದರಿಯನ್ನೇ ಕೊಲೆ ಮಾಡಿರುವ ಪ್ರಕರಣ ಶಿಗ್ಗಾಂವ ಪಟ್ಟಣದ ಗುಡ್ಡದ ಓಣಿಯ ಅಂಗನವಾಡಿ ಕೇಂದ್ರದಲ್ಲಿ ನಡೆದಿದ್ದು, ಆರೋಪಿಯನ್ನ ಪೊಲೀಸರು ಸಾರ್ವಜನಿಕರೇ ಹಿಡಿದು ಕೊಟ್ಟಿದ್ದಾರೆ.
ಹುಬ್ಬಳ್ಳಿ ತಾಲೂಕಿನ ತಾರಿಹಾಳ ಗ್ರಾಮದ ಸಂಜು ಎಂಬಾತನೇ ಸೆರೆಯಾದ ಆರೋಪಿಯಾಗಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಒಂಟಗೋಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿಗ್ಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಿಖರವಾದ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
