Big Exclusive: ಧಾರವಾಡದಲ್ಲಿ ಯುವ ಕಾಂಗ್ರೆಸ್ ಮುಖಂಡ “ಪೈರೋಜಖಾನ ಪಠಾಣ” ಹತ್ಯೆ- ಸ್ಥಳಕ್ಕೆ ಪೊಲೀಸರು ದೌಡು…
ಧಾರವಾಡ: ಯುವ ಕಾಂಗ್ರೆಸ್ ಮುಖಂಡರೊಬ್ವರನ್ನ ಅವರದ್ದೆ ಮನೆಯೊಳಗೆ ನುಗ್ಗಿ ಹತ್ಯೆ ಮಾಡಿರುವ ಪ್ರಕರಣ ಈಗಷ್ಟೇ ನಡೆದಿದ್ದು, ಸ್ಥಳಕ್ಕೆ ಧಾರವಾಡ ಉಪನಗರ ಠಾಣೆಯ ಪೊಲೀಸರು ದೌಡಾಯಿಸುತ್ತಿದ್ದಾರೆ.
ಧಾರವಾಡ ಮೆಹಬೂಬನಗರದ ನಿವಾಸಿಯಾಗಿರುವ ಯುವ ಕಾಂಗ್ರೆಸ್ ಮುಖಂಡ ಪೈರೋಜ್ಖಾನ ಪಠಾಣ ಹತ್ಯೆಯನ್ನ ಮಾಡಲಾಗಿದೆ ಎಂದು ಮಾಹಿತಿ ದೊರಕಿದೆ.
ಘಟನೆಗೆ ನಿಖರವಾದ ಕಾರಣವೇನು ಎಂಬುದು ಗೊತ್ತಾಗಿಲ್ಲ. ಮತ್ತಷ್ಟು ಮಾಹಿತಿಯನ್ನ ನಿರೀಕ್ಷೆ ಮಾಡಲಾಗುತ್ತಿದೆ.
