Posts Slider

Karnataka Voice

Latest Kannada News

ಧಾರವಾಡ: ಏಳು ಬೈಕ್‌ಗಳ ಕಳ್ಳತನ ಮಾಡಿದ್ದ ಆರೋಪಿಯ ಬಂಧನ; 2.35 ಲಕ್ಷದ ಮೌಲ್ಯದ ವಾಹನ ಜಪ್ತಿ

Spread the love

ಧಾರವಾಡ: ನಗರದ ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಧಾರವಾಡ ಶಹರ ಪೊಲೀಸರು, ಆತನಿಂದ 2.35 ಲಕ್ಷ ರೂ. ಮೌಲ್ಯದ ಒಟ್ಟು 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

​ಧಾರವಾಡದ ಕಮಲಾಪುರದ ದ್ಯಾಮವ್ವನಗುಡಿ ಓಣಿಯ ನಿವಾಸಿ ಶಿವಾನಂದ ಅರ್ಜುನ ಮಾನೆ (33) ಬಂಧಿತ ಆರೋಪಿ. ಈತ ಶಹರ ಠಾಣೆ ವ್ಯಾಪ್ತಿಯಲ್ಲಿ ಎರಡು, ಉಪನಗರ ವ್ಯಾಪ್ತಿಯಲ್ಲಿ ಒಂದು ಹಾಗೂ ಇತರೆಡೆ ನಾಲ್ಕು ಬೈಕ್‌ಗಳನ್ನು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

​ಶಹರ ಠಾಣೆ ಇನ್ಸ್‌ಪೆಕ್ಟರ್ ಗುರುನಾಥ ಚವ್ಹಾಣ, ಪಿಎಸ್‌ಐ ಆರ್.ಎಚ್. ನದಾಪ್ ಹಾಗೂ ಎಎಸ್‌ಐ ಜಿ.ಎನ್. ಹೊಸೂರು ಅವರ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಪ್ರಕರಣದ ಪತ್ತೆಯಲ್ಲಿ ಶ್ರಮಿಸಿದ ಪೊಲೀಸ್ ಸಿಬ್ಬಂದಿ ಹಾಗೂ ತಾಂತ್ರಿಕ ವಿಭಾಗದ ತಂಡಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *