ಧಾರವಾಡ: ಏಳು ಬೈಕ್ಗಳ ಕಳ್ಳತನ ಮಾಡಿದ್ದ ಆರೋಪಿಯ ಬಂಧನ; 2.35 ಲಕ್ಷದ ಮೌಲ್ಯದ ವಾಹನ ಜಪ್ತಿ
ಧಾರವಾಡ: ನಗರದ ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಧಾರವಾಡ ಶಹರ ಪೊಲೀಸರು, ಆತನಿಂದ 2.35 ಲಕ್ಷ ರೂ. ಮೌಲ್ಯದ ಒಟ್ಟು 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಧಾರವಾಡದ ಕಮಲಾಪುರದ ದ್ಯಾಮವ್ವನಗುಡಿ ಓಣಿಯ ನಿವಾಸಿ ಶಿವಾನಂದ ಅರ್ಜುನ ಮಾನೆ (33) ಬಂಧಿತ ಆರೋಪಿ. ಈತ ಶಹರ ಠಾಣೆ ವ್ಯಾಪ್ತಿಯಲ್ಲಿ ಎರಡು, ಉಪನಗರ ವ್ಯಾಪ್ತಿಯಲ್ಲಿ ಒಂದು ಹಾಗೂ ಇತರೆಡೆ ನಾಲ್ಕು ಬೈಕ್ಗಳನ್ನು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಶಹರ ಠಾಣೆ ಇನ್ಸ್ಪೆಕ್ಟರ್ ಗುರುನಾಥ ಚವ್ಹಾಣ, ಪಿಎಸ್ಐ ಆರ್.ಎಚ್. ನದಾಪ್ ಹಾಗೂ ಎಎಸ್ಐ ಜಿ.ಎನ್. ಹೊಸೂರು ಅವರ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಪ್ರಕರಣದ ಪತ್ತೆಯಲ್ಲಿ ಶ್ರಮಿಸಿದ ಪೊಲೀಸ್ ಸಿಬ್ಬಂದಿ ಹಾಗೂ ತಾಂತ್ರಿಕ ವಿಭಾಗದ ತಂಡಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
