ಧಾರವಾಡ: ಮಾಜಿ ಶಾಸಕರ ಪುತ್ರನ ಹತ್ಯೆಯಲ್ಲಿ “ಬಳೆಯಾಟ” ಬಯಲಿಗೆಳೆದ SP ಗುಂಜನ ಆರ್ಯ ಜಿಲ್ಲಾ ಟೀಂ…!!!?
ಧಾರವಾಡ: ಬೈಲಹೊಂಗಲದ ಮಾಜಿ ಶಾಸಕರ ಪುತ್ರನ ಹತ್ಯೆ ಪ್ರಕರಣದ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ಅವರ ಟೀಂ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.
ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದಲೇ ಸುಟ್ಟು ಹಾಕಲಾಗಿದ್ದ ಪ್ರಕರಣವನ್ನ ಚಾಣಾಕ್ಷತನದಿಂದ ಹೊರತೆಗೆಯುವುದರಲ್ಲಿ ಸಫಲರಾಗಿದ್ದು, ಧಾರವಾಡ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಶಿವಾನಂದ ಕಮತಗಿ ಸೇರಿದಂತೆ ಗರಗ ಠಾಣೆಯ ಇನ್ಸಪೆಕ್ಟರ್ ಶಿವಯೋಗಿ ಲೋಹಾರ ತಂಡ ಆರೋಪಿಗಳನ್ನ ಪತ್ತೆ ಹಚ್ಚುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಶ ಸಾಧಿಸಿದ್ದಸರೆಂದು ಗೊತ್ತಾಗಿದೆ.

ಪ್ರಕರಣದಲ್ಲಿ “ಬಳೆಯಾಟ” ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗುತ್ತಿದ್ದು, ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ಅವರು ಅಧಿಕೃತ ಮಾಹಿತಿಯನ್ನ ಇಂದು ಮಾಧ್ಯಮಗಳ ಮುಂದೆ ವಿವರಿಸುವ ನಿರೀಕ್ಷೆಯಿದೆ.
