ಧಾರವಾಡ: ಸೋಮಾಪುರದಲ್ಲಿದ್ದ ಸತಿಯನ್ನ ಸವದತ್ತಿ ರಸ್ತೆಯಲ್ಲಿ ಬೆಳಗಾವಿಯವರಿಂದ ಹತ್ಯೆ ಮಾಡಿಸಿದ ನರೇಂದ್ರದ ಪತಿ…!!!!
ಧಾರವಾಡ: ಸವದತ್ತಿ ರಸ್ತೆಯಲ್ಲಿ ಅಪರಿಚಿತ ವಾಹನ ಹಾಯ್ದು ಸತ್ತಿದ್ದಾಳೆಂದುಕೊಂಡಿದ್ದ ಪ್ರಕರಣವನ್ನ ಚಾಣಾಕ್ಷತನದಿಂದ ಪತ್ತೆ ಹಚ್ಚಿರುವ ಧಾರವಾಡ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಶಿವಾನಂದ ಕಮತಗಿ ಟೀಂ, ಇದು ಸುಫಾರಿ ಹತ್ಯೆ ಎಂಬುದನ್ನ ಪತ್ತೆ ಹಚ್ಚಿದ್ದಾರೆ.
ಕಳೆದ ನಾಲ್ಕೈದು ದಿನಗಳ ಹಿಂದೆ ನಡೆದಿದ್ದ ಪ್ರಕರಣದಲ್ಲಿ ಲಲಿತಾ ಹಕ್ಕರಕಿ ಎಂಬಾಕೆ ಸಾವಿಗೀಡಾಗಿದ್ದಳು. ಆದರೆ, ಅದರ ಅಸಲಿಯತ್ತು ಬೇರೆ ಎಂಬುದೀಗ ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಮೊದಲ ಪತ್ನಿಯನ್ನ ಹತ್ಯೆ ಮಾಡಲು ಲಕ್ಷಾಂತರ ರೂಪಾಯಿ ಹಣದ ಸುಫಾರಿಯನ್ನ ಗಂಡ ನೀಡಿದ್ದನಂತೆ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ಅವರು ಸಮಗ್ರ ಚಿತ್ರಣವನ್ನ ಬಿಚ್ಚಿಡಲಿದ್ದಾರೆ.
ಕೆಲವೇ ಸಮಯದಲ್ಲಿ ಆ ಎಲ್ಲ ಮಾಹಿತಿಯನ್ನ ಕರ್ನಾಟಕವಾಯ್ಸ್. ಕಾಂ ನಿಮ್ಮ ಮುಂದಿಡಲಿದೆ.
