ಧಾರವಾಡ ಕೆ.ಇ. ಬೋರ್ಡ್ ಮಹತ್ವದ ಕ್ರಮ: ವಿದ್ಯಾರ್ಥಿಗೆ ವಂಚಿಸಿದ್ದ ವಿದ್ಯಾರಣ್ಯ ಹೈಸ್ಕೂಲ್ ಶಿಕ್ಷಕ ರಾಜಶೇಖರ್ ಕೆಲಸದಿಂದ ಅಮಾನತು…
ಧಾರವಾಡ: ಪರೀಕ್ಷೆಯ ನೆಪ ಹೇಳಿ ವಿದ್ಯಾರ್ಥಿಯ ಬಳಿ ಇದ್ದ ಚಿನ್ನಾಭರಣಗಳನ್ನು ದೋಚಿದ ಆರೋಪದ ಹಿನ್ನೆಲೆಯಲ್ಲಿ, ಇಲ್ಲಿನ ವಿದ್ಯಾರಣ್ಯ ಹೈಸ್ಕೂಲ್ ಶಿಕ್ಷಕ ರಾಜಶೇಖರ್ ಅವರನ್ನು ಕೆ.ಇ. ಬೋರ್ಡ್ ಸಂಸ್ಥೆಯು ಅಮಾನತುಗೊಳಿಸಿದೆ.
ಶಿಕ್ಷಕ ರಾಜಶೇಖರ್ ಅವರು ತನ್ನದೇ ಶಾಲೆಯ ವಿದ್ಯಾರ್ಥಿಯೊಬ್ಬನನ್ನು ನಂಬಿಸಿ, ಪರೀಕ್ಷೆಯ ಕೆಲಸವಿದೆಯೆಂದು ಹೇಳಿ ಆತನ ಚಿನ್ನದ ಸರವನ್ನು ಕಿತ್ತುಕೊಂಡಿದ್ದರು ಎನ್ನಲಾಗಿದೆ. ಈ ವಿಷಯ ಪೋಷಕರಿಗೆ ತಿಳಿದು ಆಡಳಿತ ಮಂಡಳಿಗೆ ದೂರು ನೀಡಿದ ಬೆನ್ನಲ್ಲೇ ಎಚ್ಚೆತ್ತ ಸಂಸ್ಥೆಯು, ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಕಪ್ಪುಚುಕ್ಕೆ ತಂದ ಈ ಕೃತ್ಯದ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಸದ್ಯ ಶಿಕ್ಷಕನನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ.
