ಹುಬ್ಬಳ್ಳಿ ಗ್ರಾಮೀಣ ಠಾಣೆ “ಮುರಗೇಶ ಚೆನ್ನಣ್ಣನವರ” ಮುಂದುವರಿಕೆಗೆ ಸರಕಾರದ ಆದೇಶ…!!!
ಬೆಂಗಳೂರು: ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ಅವರ ವರ್ಗಾವಣೆಯನ್ನ ರದ್ದುಗೊಳಿಸಿ, ಮತ್ತೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿಯೇ ಮುಂದುವರೆಸಿ ಆದೇಶ ಹೊರಡಿಸಲಾಗಿದೆ.
ಐದಾರು ದಿನಗಳ ಹಿಂದೆ ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ಅವರನ್ನ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತಾದರೂ, ಸರಕಾರವೇ ಈಗ ಅದನ್ನ ಮರು ಪರಿಶೀಲಿಸಿ, ಹಿಂದಿನ ಆದೇಶವನ್ನ ರದ್ದು ಮಾಡಿದೆ.

ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ಅವರು ಇನಾಂ ವೀರಾಪೂರದ ಘಟನೆಯ ವೇಳೆಯಲ್ಲಿ ಪ್ರತಿಯೊಬ್ಬರು ಇಷ್ಟಪಡುವ ಹಾಗೇ ಕರ್ತವ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲದೇ, ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಅನಾಚಾರಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದ್ದಾರೆ.
ಮುರಗೇಶ ಚೆನ್ನಣ್ಣನವರ ಅವರ ವರ್ಗಾವಣೆ ಆದೇಶ ಬಂದಾಗ ಬಹುತೇಕರು ತೀವ್ರ ಬೇಸರವ್ಯಕ್ತಪಡಿಸಿದ್ದರು. ಸರಕಾರದ ಆದೇಶದಿಂದ ದಕ್ಷ ಅಧಿಕಾರಿ ಅದೇ ಸ್ಥಳದಲ್ಲಿ ಮುಂದುವರೆದಿದ್ದು, ಜನರಲ್ಲೂ ಸಂತಸ ಮೂಡಿಸಿದೆ.
