ಧಾರವಾಡ: ಅಂಬಿಗೇರ ಚೌಡಯ್ಯ ‘ಸಮಾಜದವರ’ ಸ್ಮಾರಕ ಮಣ್ಣು ಮಾಡಲು ಹುನ್ನಾರ- ವೀರಶೈವ ಮುಖಂಡರ ಆಕ್ರೋಶ…!!!
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಪ್ರಮುಖ ಸ್ಥಳಗಳಲ್ಲಿ ಇರುವ ಅಂಬಿಗೇರ ಚೌಡಯ್ಯ ಸಮಾಜದ ಗದ್ದುಗೆಗಳು ಮತ್ತು ಸ್ಮಾರಕವನ್ನ ಸದ್ದಿಲ್ಲದೇ ಮುಚ್ಚಿ ಹಾಕುವ ಷಡ್ಯಂತ್ರ ನಡೆದಿದ್ದು, ಇದನ್ನ ತಕ್ಷಣ ಕೈ ಬಿಡಬೇಕೆಂದು ವೀರಶೈವ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ.
ಸ್ಮಾರಕದ ಪಕ್ಕದಲ್ಲಿ ಈಗಾಗಲೇ ಬಹುದೊಡ್ಡ ಗುಂಡಿಯೊಂದನ್ನ ತೆಗೆದಿದ್ದು, ಇತಿಹಾಸವನ್ನ ಮುಚ್ಚುವ ಯತ್ನ ನಡೆದಿದೆ ಎಂದು ವೀರಶೈವ ಸಮಾಜದ ಮುಖಂಡ ನಾಗನಗೌಡ ನೀರಲಗಿಪಾಟೀಲ ಆಕ್ರೋಶವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಿಸಿರುವ ನಾಗನಗೌಡರು, ಈ ಪ್ರಮಾದವನ್ನ ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
