ಪೊಲೀಸ್ ಇನ್ಸಪೆಕ್ಟರ್ಗಳ ವರ್ಗಾವಣೆ: ಸಂಗಮೇಶ ದಿಡಿಗನಾಳ ಗೋಕುಲ, ರತ್ನಾ ಭರಮಪ್ಪನವರ ಮಹಿಳಾ ಠಾಣೆ…
ಬೆಂಗಳೂರು: ರಾಜ್ಯದ 129 ಪೊಲೀಸ್ ಇನ್ಸಪೆಕ್ಟರ್ಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಠಾಣೆಗಳಿಗೆ ಇನ್ಸಪೆಕ್ಟರ್ಗಳನ್ನ ವರ್ಗಾಯಿಸಲಾಗಿದೆ.

ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆಗೆ ಸಂಗಮೇಶ ದಿಡಿಗನಾಳ, ಮಹಿಳಾ ಪೊಲೀಸ್ ಠಾಣೆಗೆ ರತ್ನಾ ಭರಮಪ್ಪನವರ, ಸಿಸಿಬಿಗೆ ದಯಾನಂದ ಶೇಗುಣಸಿ, ಧಾರವಾಡ ನಗರ ಠಾಣೆಗೆ ಗುರುನಾಥ ಚವ್ಹಾಣ ವರ್ಗಾವಣೆಯಾಗಿದೆ.

ಸಿಸಿಬಿಯಲ್ಲಿದ್ದ ಅಲಿ ಅಬೂಬಕರ ಶೇಖ ಅವರನ್ನ ವಿಜಯಪುರ ಸಂಚಾರಿ ಠಾಣೆಗೆ ವರ್ಗಾಯಿಸಲಾಗಿದೆ. ಧಾರವಾಡ ಉಪನಗರ ಠಾಣೆಗೆ ಇನ್ನೂ ಯಾರನ್ನ ವರ್ಗಾಯಿಸಿಲ್ಲ.
