Posts Slider

Karnataka Voice

Latest Kannada News

​”ಕೊಂದಿದ್ದು ನಾನೇ… ಮಚ್ಚಿನ ಸಮೇತ ಕೋರ್ಟ್‌ಗೆ ಬರ್ತೇವಿ!” : ಹತ್ಯೆ ಕೇಸ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ವಿಸ್ಟ್…

Spread the love

ಹತ್ಯೆ ಪ್ರಕರಣ: ‘ನಾನೇ ಕೊಂದಿದ್ದು’ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿ ಪ್ರತ್ಯಕ್ಷ!

ಕೋಲಾರ: ಮೆಟ್ಟುಬಂಡೆ ಬಳಿ ಜನವರಿ 27 ರಂದು ನಡೆದಿದ್ದ ಯಲ್ಲೇಶ್ (41) ಎಂಬುವವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಬಿಂದು ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

​ನರಸಾಪುರದ ಸಂತೋಷ್ ಪುತ್ರ ಬಿಂದು ಕುಮಾರ್, ತಾನು ಹಾಗೂ ಅಕ್ಷಯ್ ತಂಡ ಸೇರಿ ಈ ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ. “ನನ್ನ ತಂಗಿಯ ಬಗ್ಗೆ ಯಲ್ಲೇಶ್ ಅಸಭ್ಯವಾಗಿ ಮಾತನಾಡಿದ್ದ. ಈ ಬಗ್ಗೆ ಐದು ಬಾರಿ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ. ನಮ್ಮನ್ನು ಕೊಲ್ಲಲು ಸಂಚು ರೂಪಿಸಿದ್ದಕ್ಕೆ ನಾನೇ ಮೊದಲು ಆತನನ್ನು ಮುಗಿಸಿದೆ” ಎಂದು ಆರೋಪಿ ಹೇಳಿಕೊಂಡಿದ್ದಾನೆ.

​ಅಲ್ಲದೆ, ಈ ಕೊಲೆಗೂ ತನ್ನ ತಂದೆ ಸಂತೋಷ್‌ಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಂದು, ಶೀಘ್ರದಲ್ಲೇ ಆಯುಧದ ಸಮೇತ ನ್ಯಾಯಾಲಯಕ್ಕೆ ಶರಣಾಗುವುದಾಗಿ ತಿಳಿಸಿದ್ದಾನೆ. ಹಳೇ ದ್ವೇಷ ಹಾಗೂ ಕೌಟುಂಬಿಕ ಕಲಹವೇ ಈ ಹತ್ಯೆಗೆ ಕಾರಣ ಎನ್ನಲಾಗಿದೆ.


Spread the love

Leave a Reply

Your email address will not be published. Required fields are marked *

You may have missed