“ನಕಲಿ ಚಿನ್ನ” ಧಾರವಾಡದಲ್ಲಿ ಸಿಕ್ಕಿಬಿದ್ದ “ಅಸಲಿ” ಆರೋಪಿಗಳು…!!!

ಧಾರವಾಡ: ನಕಲಿ ಚಿನ್ನವನ್ನ ಅಸಲಿ ಚಿನ್ನವೆಂದು ಮಾರಾಟ ಮಾಡಲು ಯತ್ನಿಸಿದ್ದ ರಾಜಸ್ಥಾನ ಮೂಲದ ಇಬ್ಬರನ್ನ ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ವೀಡಿಯೋ…
ಧಾರವಾಡದ ವ್ಯಾಪಾರಿಯೊಬ್ಬನನ್ನ ವಂಚಿಸಿ ಪರಾರಿಯಾಗಿದ್ದ ವಂಚಕರಿಬ್ಬರು ಮತ್ತೋರ್ವ ವ್ಯಾಪಾರಿಗೆ ಟೊಪ್ಪಿಗೆ ಹಾಕಲು ಮುಂದಾದ ಸಮಯದಲ್ಲಿ ಜಾಗೃತಗೊಂಡವರು ಇಬ್ಬರು ಹಿಡಿದು, ಬಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತರನ್ನ ರಾಜಸ್ಥಾನದ ಜಾಲೂರ ಜಿಲ್ಲೆ ದಿನಮಾನ ತಾಲೂಕು ಸಿಕ್ವಾಡ ಗ್ರಾಮದ ಗಣೇಶರಾವ್ ಮತ್ತು ಅಪ್ಪು ಎಂದು ಗುರುತಿಸಲಾಗಿದೆ.
ಶಹರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.