Posts Slider

Karnataka Voice

Latest Kannada News

ಗರಗದಲ್ಲಿ ದಾಸ್ತಾನು ಮಾಡಿದ್ದ “184” ಪಿಓಪಿ ಗಣೇಶ ಮೂರ್ತಿ ವಶಕ್ಕೆ…

Spread the love

ಧಾರವಾಡ: ಗಣೇಶ ಚತುರ್ಥಿ ಇನ್ನೂ ಎರಡು ತಿಂಗಳು ಬಾಕಿಯಿರುವಾಗಲೇ ಧಾರವಾಡ ಜಿಲ್ಲಾಡಳಿತ ಕಾರ್ಯಾಚರಣೆ ಆರಂಭಿಸಿದ್ದು, 184 ಪಿಓಪಿ ಗಣೇಶ ಮೂರ್ತಿಯನ್ನ ವಶಕ್ಕೆ ಪಡೆಯಲಾಗಿದೆ.

ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿ ದಾಸ್ತಾನು ಮಾಡಿದ್ದ ಒಟ್ಟು 184 ಗಣಪತಿ ವಿಗ್ರಹಗಳ ಜೊತೆಗೆ ಎರಡು ಬೃಹತ್ ಗಣಪತಿ ಮೂರ್ತಿ ವಶಕ್ಕೆ ಪಡೆಯಲಾಗಿದೆ.

ವೀಡಿಯೋ

ವಿನಾಯಕ್ ಪತ್ತಾರ ಎನ್ನುವವರಿಗೆ ಸೇರಿದ ಗೋಡೌನ್ ನಲ್ಲಿ ಪತ್ತೆಯಾಗಿದ್ದು, ಮಾಹಿತಿ ಮೇರೆಗೆ ಅಧಿಕಾರಿಗಳಿಂದ ದಾಳಿ ನಡೆದಿದೆ. ಜಪ್ತಿ ಮಾಡಿದ ವಿಗ್ರಹಗಳನ್ನು ಡಿಸಿ ದಿವ್ಯ ಪ್ರಭು ಅವರು ವೀಕ್ಷಿಸಿ, ದಾಸ್ತಾನುದಾರರು ಮೇಲೆ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಂದ ನಡೆದ ಕಾರ್ಯಾಚರಣೆ ನಡೆದಿದ್ದು, ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.


Spread the love

Leave a Reply

Your email address will not be published. Required fields are marked *

You may have missed