ಈರೇಶ ಅಂಚಟಗೇರಿಯವರೇ “ಡಾ.ಪ್ರಕಾಶ ರಾಮನಗೌಡರ” ಅವರು ಕಂಪ್ಲೇಟ್ ಕೊಟ್ರಾ…!? Blackmailers ಯಾರೂ ಅಂತಾ ಗೊತ್ತಾಯ್ತಾ…!?

ಧಾರವಾಡ: ಅಖಂಡ ಧಾರವಾಡ ಜಿಲ್ಲೆಯಲ್ಲಿ ತಮ್ಮದೆ ಆದ ರೀತಿಯಲ್ಲಿ ಹೆಸರು ಮಾಡಿರುವ ಡಾಕ್ಟರ್ ರಾಮನಗೌಡರ ಕುಟುಂಬದ ಕುಡಿಗೆ “ಬೇಡಿಕೆ” ಬಂದಾಗಲೂ ಯಾವುದೇ ದೂರು ನೀಡದೇ ಇರುವುದು ಅವರ ಘನತೆಯನ್ನ ಬಿಂಬಿಸತೊಡಗಿದೆ.
ರಾಜ್ಯದಲ್ಲಿ ಸದ್ದು ಮಾಡಿದ್ದ ಡಾ.ಪ್ರಕಾಶ ರಾಮನಗೌಡರ ರಾಸಲೀಲೆಯದ್ದು ಎನ್ನಲಾದ ವೀಡಿಯೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಇದಾದ ಮರುದಿನವೇ ಹೇಳಿಕೆ ನೀಡಿದ್ದ ಡಾ.ಪ್ರಕಾಶ ಅವರು, ಹಣದ ಬೇಡಿಕೆಯಿಟ್ಡಿದ್ದು, ಅವರ ವೀಡಿಯೋ, ಆಡೀಯೋ ಇವೆ ಎಂದಿದ್ದರು.
ಈ ನಡುವೆ ಮಾಜಿ ಮೇಯರ್ ಈರೇಶ ಅಂಚಟಗೇರಿ ಸಾಮಾಜಿಕ ಜಾಲತಾಣದಲ್ಲಿ ಡಾ.ಪ್ರಕಾಶ ರಾಮನಗೌಡರ ಪರವಾಗಿ ಬೆಂಬಲ ಸೂಚಿಸಿ, ತೇಜೋವಧೆ ಮಾಡುವ ದುಷ್ಟ ಶಕ್ತಿಗಳ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದರು.
ಸೋಜಿಗವೆಂದರೇ, ಈ ವರೆಗೂ ಡಾ.ಪ್ರಕಾಶ ರಾಮನಗೌಡರ ದೂರು ನೀಡಿಲ್ಲ. ಹೀಗಾಗಿ ಯಾರ ವಿರುದ್ಧ ಯಾರು ಕ್ರಮ ತೆಗೆದುಕೊಳ್ಳಬೇಕು ಎಂಬ ಪ್ರಶ್ನೆ ಇದೀಗ ಮೂಡಿದೆ.
ಡಾ.ಪ್ರಕಾಶ ರಾಮನಗೌಡರ ತಮ್ಮ ಹೇಳಿಕೆಯಲ್ಲಿ ಪದೇ ಪದೇ ಮಾಧ್ಯಮ… ಮಾಧ್ಯಮ ಎಂದಿದ್ದಾರೆ. ಅವರು ಯಾರೂ ಯಾವ ಮಾಧ್ಯಮದವರು ಎಂಬುದನ್ನ ಹೇಳಲು ಯಾಕೆ ಆಗುತ್ತಿಲ್ಲ. ಎಲ್ಲವೂ ನಾಟಕವೇ…!? ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.
ಸತ್ಯವನ್ನ ಹೇಳಲು ಹಿಂದೇಟು ಹಾಕುವುದರಲ್ಲಿ ಯಾವ ಅರ್ಥ ಅಡಗಿದೆ. ಅಂಚಟಗೇರಿಯವರೇ ಈಗ ಯಾರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಜರುಗಿಸಲು ಒತ್ತಾಯಿಸುತ್ತೀರಿ…