ಕುಂದಗೋಳದ ಯರಿನಾರಾಯಣಪೂರದಲ್ಲಿ ನೀರಲ್ಲಿ ಮುಳುಗಿ ಮಕ್ಕಳಿಬ್ಬರ ದುರ್ಮರಣ….

ಕುಂದಗೋಳ: ತಾಲ್ಲೂಕಿನ ಯರಿನಾರಾಯಣಪುರ ಗ್ರಾಮದ ಅವಳಿ ಜವಳಿ ಎರಡು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಗುರುವಾರ ಬೆಳಿಗ್ಗೆ ಜರುಗಿದೆ.
ಗ್ರಾಮದ ಮಜಮೀಲ್ ಶರೀಫಸಾಬ ಚಾಂದಖಾನವರ ಹಾಗೂ ಮದಸೀರ ಶರೀಫಸಾಬ ಚಾಂದಖಾನವರ ಸಾವಿಗೀಡಾಗಿದ್ದಾರೆ.
ತಂದೆ ಶರೀಫಸಾಬ ಆನಾರೋಗ್ಯ ಪೀಡತರಾಗಿದ್ದು, ತಾಯಿ ಹುಬ್ಬಳ್ಳಿ ಕೂಲಿ ಕೇಲಸಕ್ಕೆ ಹೋಗುತ್ತಾರೆ. ಮನೆಯಲ್ಲಿ ಅಜ್ಜಿ ಮಕ್ಕಳನ್ನು ನೊಡಿಕೊಳ್ಳುತ್ತಾಳೆ ಬೆಳಿಗ್ಗೆ ಮಕ್ಕಳು ಆಟವಾಡುವಾಗ ಘಟನೆ ಜರುಗಿದ್ದು, ಗ್ರಾಮಸ್ಥರು ಮಕ್ಕಳನ್ನು ರಕ್ಷಿಸಿ ಕುಂದಗೋಳ ಸರ್ಕಾರಿ ಆಸ್ಪತ್ರೆಗೆ ಕರೆತಂದರು ಬದುಕಿರಲಿಲ್ಲ.
ಈ ಮಕ್ಕಳ ಸಾವಿಗೆ ಎಲ್ಲರೂ ಕಂಬನಿ ಹಾಕುವ ದೃಶ್ಯ ಎಂತವರನ್ನು ಕರಳು ಹಿಂಡುವಂತೆ ಮಾಡಿದೆ.