ಶಿಕ್ಷಣ ಇಲಾಖೆಯ ಕಮೀಷನರ್ “ಜಯಶ್ರೀ ಶಿಂತ್ರಿ” ವರ್ಗಾವಣೆ- ರುದ್ರೇಶ ಘಾಳಿ ನೂತನ ಕಮೀಷನರ್…!!!

ಬೆಂಗಳೂರು: ಶಿಕ್ಷಣ ಇಲಾಖೆಯ ಕಮೀಷನರ್ ಜಯಶ್ರೀ ಶಿಂತ್ರೆ ಅವರನ್ನ ರಾಜ್ಯ ಸರಕಾರ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದ್ದು, ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಘಾಳಿ ಅವರನ್ನ ವರ್ಗಾವಣೆ ಆದೇಶ ಹೊರಡಿಸಿದೆ.
ಕಳೆದ ಐದು ತಿಂಗಳ ಹಿಂದಷ್ಟೇ ಪಾಲಿಕೆ ಆಯುಕ್ತರಾಗಿ ಬಂದಿದ್ದ ರುದ್ರೇಶ ಘಾಳಿ ಅವರು ಶಿಕ್ಷಣ ಇಲಾಖೆಗೆ ಧಿಡೀರನೆ ವರ್ಗಾವಣೆ ಆಗಿದ್ದು ಅಚ್ಚರಿ ಮೂಡಿಸಿದೆ.
ಶಿಕ್ಷಣ ಇಲಾಖೆಯಲ್ಲಿ ಉತ್ತಮ ಕೆಲಸದ ನಿರೀಕ್ಷೆಯನ್ನ ರುದ್ರೇಶ ಘಾಳಿಯವರಲ್ಲಿ ಇಡಬಹುದಾಗಿದ್ದು, ಪ್ರಮುಖ ಬದಲಾವಣೆಯ ನಡೆಯಬಹುದಾಗಿದೆ.