Posts Slider

Karnataka Voice

Latest Kannada News

ನವಲಗುಂದದ “ಮಹಾಗುರು” ಎಂ.ಎಂ.ಮುಲ್ಲಾ ‘ಮಾಸ್ತರ್’ ಇನ್ನಿಲ್ಲ…. ಕಣ್ಣೀರಿನಲ್ಲಿ ಶಿಷ್ಯಕೋಟಿ…!!!

Spread the love

ನವಲಗುಂದ: ಸಾವಿರಾರು ವಿದ್ಯಾರ್ಥಿಗಳಿಗೆ ಬದುಕಿನ ಪಾಠ ಕಲಿಸಿದ್ದ ಪಟ್ಟಣದ ಮಹಾಗುರು ಎಂದೇ ಕರೆಯಲ್ಪಡುತ್ತಿದ್ದ ನಿವೃತ್ತ ಶಿಕ್ಷಕರೋರ್ವರು, ಅಪಘಾತದಲ್ಲಿ ಸಾವಿಗೀಡಾಗಿದ್ದು, ಇಡೀ ನವಲಗುಂದ ಪಟ್ಟಣದಲ್ಲಿ ಶೋಕದ ವಾತಾವರಣ ಮೂಡಿದೆ.

ದೈಹಿಕ ಶಿಕ್ಷಣ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದ ಮಕ್ತುಮಸಾಬ ಮುಲ್ಲಾ ಅವರು ರಸ್ತೆ ಅಪಘಾತದಲ್ಲಿ ಮಧ್ಯಾಹ್ನ ಸಾವಿಗೀಡಾಗಿದ್ದು, ಇಂದು ರಾತ್ರಿ ಎಂಟು ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ.

ಮುಲ್ಲಾ ಸರ್ ಎಂದು ಎಲ್ಲರಿಂದ ಗುರುತಿಸಿಕೊಂಡಿದ್ದ ಇವರು, ತಮ್ಮದೇ ಆದ ಶಿಷ್ಯಂದಿರ ಆಪ್ತರನ್ನ ಬೆಳೆಸಿಕೊಂಡಿದ್ದರು. ಪಟ್ಟಣದಲ್ಲಿ ಸಮಾಜಕ್ಕಾಗಿಯೂ ಸಾಕಷ್ಟು ಸಹಕಾರ ನೀಡಿದ್ದರು. ಪ್ರತಿ ಸಮಾಜದವರೊಂದಿಗೂ ಅತ್ಯುತ್ತಮ ಬಾಂಧವ್ಯ ಹೊಂದಿದ್ದರು.

ನಿವೃತ್ತ ಶಿಕ್ಷಕರು ಮೂವರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ.

ಮುಲ್ಲಾ ಸರ್, ಸಾವಿನಿಂದ ಅವರ ಶಿಷ್ಯಕೋಟಿಗೆ ಹಾಗೂ ಪಟ್ಟಣಕ್ಕೆ ತುಂಬಲಾರದ ನಷ್ಟವಾಗಿದ್ದು, ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡುವ ಜೊತೆಗೆ ಕುಟುಂಬಕ್ಕೆ ಈ ನೋವನ್ನ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಪ್ರಾರ್ಥಿಸಿದ್ದಾರೆ.


Spread the love

Leave a Reply

Your email address will not be published. Required fields are marked *