ಹೊಸ ಕಲ್ಪನೆಯೊಂದಿಗೆ “ತಿರಂಗಾ ಯಾತ್ರೆ” ನಡೆಸಿದ ಧಾರವಾಡ-71 ನಾಗರಿಕರು: ಅಮೃತ ದೇಸಾಯಿ, ಸೀಮಾ ಮಸೂತಿ ಭಾಗಿ….

ಧಾರವಾಡ: ಆಪ್ರೇಷನ್ ಸಿಂಧೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ಧಾರವಾಡ-71 ಕ್ಷೇತ್ರದ ಗ್ರಾಮೀಣ ಮತ್ತು ಶಹರ ನಾಗರಿಕರ ಪರವಾಗಿ ಅಮೋಘವಾದ ತಿರಂಗಾ ಯಾತ್ರೆಯನ್ನ ಹಮ್ಮಿಕೊಳ್ಳಲಾಗಿತ್ತು.
ಯಾತ್ರೆಯ ವೀಡಿಯೋ ಇಲ್ಲಿದೆ ನೋಡಿ…
ತಿರಂಗಾ ಯಾತ್ರೆಗೆ ಶಿಂಗನಹಳ್ಳಿ ಗ್ರಾಮದ ಹಳ್ಳಿಗಿರಿ ಮಠದ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು. ಮಾಜಿ ಶಾಸಕರುಗಳಾದ ಅಮೃತ ದೇಸಾಯಿ, ಸೀಮಾ ಮಸೂತಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಶಂಕರ ಕೋಮಾರದೇಸಾಯಿ, ಶಂಕರ ಶೇಳಕೆ, ಶಿವು ಬೆಳಾರದ ಸೇರಿದಂತೆ ಹಲವರು ಭಾಗವಹಿಸಿದ್ದರು.
ನಾಗರಿಕರು, ಮಾಜಿ ಯೋಧರು, ವಿದ್ಯಾರ್ಥಿಗಳು ಭಾಗವಹಿಸಿದ್ದ ತಿರಂಗಾ ಯಾತ್ರೆಯಲ್ಲಿ ‘ರಾಷ್ಟ್ರ ರಕ್ಷಣೆಗಾಗಿ ನಾಗರಿಕರು’ ಘೋಷಣೆ ಜನಮನ ಸೆಳೆಯಿತು.