Posts Slider

Karnataka Voice

Latest Kannada News

ಕೆಎಂಸಿ ನಿರ್ದೇಶಕ “2ಕೋಟಿ ಡೀಲ್”- ಏನೂ ಮಾತಾಡದ ಧಾರವಾಡ ಜಿಲ್ಲಾ ಬಿಜೆಪಿ…!!!

Spread the love

ಹುಬ್ಬಳ್ಳಿ: ಕೆಎಂಸಿಐಆರ್ ನಿರ್ದೇಶಕ ಹುದ್ದೆ ಬರಲು ಕೋಟಿ ಕೋಟಿ ಡೀಲ್ ನಡೆದಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಆರೋಪ ಮಾಡಿ, ಪ್ರಕರಣವನ್ನ ಸಿಬಿಐಗೆ ನೀಡಿ ಎಂದು ಆಗ್ರಹ ಮಾಡಿದ ನಂತರವೂ ಭಾರತೀಯ ಜನತಾ ಪಕ್ಷದ ಧಾರವಾಡ ಜಿಲ್ಲೆಯ ಯಾವೊಬ್ಬ ಮುಖಂಡರು ಈ ಬಗ್ಗೆ ಮಾತಾಡದೇ ಇರುವುದು ಹಲವು ಅನುಮಾನಗಳನ್ನ ಹುಟ್ಟಿ ಹಾಕಿದೆ.

ಕೆಪಿಸಿಸಿ ಕಾರ್ಯದರ್ಶಿ ನೂರ‌ಅಹ್ಮದ ನದಾಫ ಅವರು ಕೆಎಂಸಿ ನಿರ್ದೇಶಕ ಹುದ್ದೆಯಲ್ಲಿರುವ ಡಾ.ಎಸ್.ಎಫ್.ಕಮ್ಮಾರ ಅವರು ಎರಡು ಕೋಟಿ ಹಣ ಕೊಟ್ಟು ಬಂದಿದ್ದಾರೆ. ಆ ಹಣವನ್ನ ನಾನೇ ತಲುಪಿಸಿದ್ದು, ಎಂದು ಹೇಳಿಕೆ ನೀಡಿದ್ದರು.

ಆ ವೀಡಿಯೋ ಇಲ್ಲಿದೆ ನೋಡಿ…

ರಾಜ್ಯದಲ್ಲಿ ಭ್ರಷ್ಟಾಚಾರದ ಬಹುದೊಡ್ಡ ಪ್ರಕರಣವಾಗಿದ್ದರೂ ಕೂಡಾ, ಧಾರವಾಡ ಜಿಲ್ಲೆಯ ಬಿಜೆಪಿ ಮುಖಂಡರು ಈ ಪ್ರಕರಣದ ಕುರಿತು ಒಂದೇ ಒಂದು ಹೇಳಿಕೆ ಕೊಡದೇ ಇರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್ ಶಾಸಕರೇ ಇದರಲ್ಲಿ ನೇರವಾಗಿ ಭಾಗವಹಿಸಿದ್ದಾರೆ ಎಂದು ಹೇಳಿಕೆ ನೀಡಿದ ನಂತರವೂ, ಪ್ರಕರಣದ ಗಂಭೀರತೆ ಅರಿಯದೇ ಇರುವುದು ಬಿಜೆಪಿಯ ಸ್ಥಿತಿಯನ್ನ ಬಿಂಬಿಸುತ್ತಿದೆ ಎಂದು ಪ್ರಜ್ಞಾವಂತರು ಮಾತನಾಡಿಕೊಳ್ಳುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *