ಕೆಎಂಸಿ ನಿರ್ದೇಶಕ “2ಕೋಟಿ ಡೀಲ್”- ಏನೂ ಮಾತಾಡದ ಧಾರವಾಡ ಜಿಲ್ಲಾ ಬಿಜೆಪಿ…!!!

ಹುಬ್ಬಳ್ಳಿ: ಕೆಎಂಸಿಐಆರ್ ನಿರ್ದೇಶಕ ಹುದ್ದೆ ಬರಲು ಕೋಟಿ ಕೋಟಿ ಡೀಲ್ ನಡೆದಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಆರೋಪ ಮಾಡಿ, ಪ್ರಕರಣವನ್ನ ಸಿಬಿಐಗೆ ನೀಡಿ ಎಂದು ಆಗ್ರಹ ಮಾಡಿದ ನಂತರವೂ ಭಾರತೀಯ ಜನತಾ ಪಕ್ಷದ ಧಾರವಾಡ ಜಿಲ್ಲೆಯ ಯಾವೊಬ್ಬ ಮುಖಂಡರು ಈ ಬಗ್ಗೆ ಮಾತಾಡದೇ ಇರುವುದು ಹಲವು ಅನುಮಾನಗಳನ್ನ ಹುಟ್ಟಿ ಹಾಕಿದೆ.
ಕೆಪಿಸಿಸಿ ಕಾರ್ಯದರ್ಶಿ ನೂರಅಹ್ಮದ ನದಾಫ ಅವರು ಕೆಎಂಸಿ ನಿರ್ದೇಶಕ ಹುದ್ದೆಯಲ್ಲಿರುವ ಡಾ.ಎಸ್.ಎಫ್.ಕಮ್ಮಾರ ಅವರು ಎರಡು ಕೋಟಿ ಹಣ ಕೊಟ್ಟು ಬಂದಿದ್ದಾರೆ. ಆ ಹಣವನ್ನ ನಾನೇ ತಲುಪಿಸಿದ್ದು, ಎಂದು ಹೇಳಿಕೆ ನೀಡಿದ್ದರು.
ಆ ವೀಡಿಯೋ ಇಲ್ಲಿದೆ ನೋಡಿ…
ರಾಜ್ಯದಲ್ಲಿ ಭ್ರಷ್ಟಾಚಾರದ ಬಹುದೊಡ್ಡ ಪ್ರಕರಣವಾಗಿದ್ದರೂ ಕೂಡಾ, ಧಾರವಾಡ ಜಿಲ್ಲೆಯ ಬಿಜೆಪಿ ಮುಖಂಡರು ಈ ಪ್ರಕರಣದ ಕುರಿತು ಒಂದೇ ಒಂದು ಹೇಳಿಕೆ ಕೊಡದೇ ಇರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ ಶಾಸಕರೇ ಇದರಲ್ಲಿ ನೇರವಾಗಿ ಭಾಗವಹಿಸಿದ್ದಾರೆ ಎಂದು ಹೇಳಿಕೆ ನೀಡಿದ ನಂತರವೂ, ಪ್ರಕರಣದ ಗಂಭೀರತೆ ಅರಿಯದೇ ಇರುವುದು ಬಿಜೆಪಿಯ ಸ್ಥಿತಿಯನ್ನ ಬಿಂಬಿಸುತ್ತಿದೆ ಎಂದು ಪ್ರಜ್ಞಾವಂತರು ಮಾತನಾಡಿಕೊಳ್ಳುತ್ತಿದ್ದಾರೆ.