Posts Slider

Karnataka Voice

Latest Kannada News

ಧಾರವಾಡ ಜಿಪಂ ಸಭೆಯಲ್ಲೇ “ಡ್ರಾ-ಅಮಾನತ್ತು ಬಹುಮಾನ”- ಸಣ್ಣ ನೀರಾವರಿ EE ಅಮಾನತ್ತು…

Spread the love

ಧಾರವಾಡ: ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು, ದಕ್ಷತೆ ಮರೆತ ಅಧಿಕಾರಿಯನ್ನ ತಕ್ಷಣವೇ ಅಮಾನತ್ತು ಮಾಡುವಂತೆ ಇಲಾಖೆಯ ಸಚಿವರಿಗೆ ಫೋನ್ ಮೂಲಕ ಹೇಳಿದ ಘಟನೆ ನಡೆಯಿತು.

ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ದೇವರಾಜ ಶಿಗ್ಗಾಂವಿ ಸಸ್ಪೆಂಡ್ ಮಾಡಿ ಎಂದು ನೀರಾವರಿ ಸಚಿವ ಬೋಸರಾಜ್‌ರಿಗೆ ಕರೆ ಮಾಡಿ ಸಂತೋಷ ಲಾಡ್ ಅವರು ಹೇಳಿದರು.

ಇಂದು ಕೆಡಿಪಿ ಸಭೆಗೆ ತಪ್ಪು ತಪ್ಪು ಮಾಹಿತಿ ನೀಡಿದ್ದಲ್ಲದೆ ಸಭೆಗೆ ಬಾರದ ಕಾರಣಕ್ಕೆ ಸಸ್ಪೆಂಡ್ ಮಾಡಿ ಎಂದು ಪೋನ್ ಕರೆ ಮಾಇದರು.

ನಾನು ಸಹ ಈಗಾಗಲೇ ಅವನನ್ನ ಸಸ್ಪೆಂಡ್ ಮಾಡಿದ್ದೇನೆ. ನೀವೂ ಈಗಲೇ ಅಮಾನತ್ತು ಮಾಡಿ ಆದೇಶ ಕಳುಹಿಸಿ ಎಂದರು.

117ಕಾಮಗಾರಿ ಗುರಿಯಲ್ಲಿ ಕೇವಲ 12ಮಾತ್ರ ಪೂರ್ಣ ಮಾಡಿದ್ದ ಅಧಿಕಾರಿ. ಈ ಹಿನ್ನೆಲೆ ಸಸ್ಪೆಂಡ್ ಮಾಡಿ ಆದೇಶ ನೀಡಿ ಎಂದು ಪೋನ್ ಮೂಲಕ ಸಚಿವರು ಹೇಳಿದರು.


Spread the love

Leave a Reply

Your email address will not be published. Required fields are marked *