ಅನಾರೋಗ್ಯದಿಂದ ಬಳಲುತ್ತಿದ್ದರೂ “ಕನ್ನಡಿಗರ ಪರವಾಗಿ” ಸಂಘಟನೆಯನ್ನ ಹೋರಾಟಕ್ಕೀಳಿಸಿದ ಸುಧೀರ ಮುಧೋಳ…

ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಧೀರ ಮುಧೋಳ ಅನಾರೋಗ್ಯದಿಂದ ಬಳಲುತ್ತಿದ್ದರೂ ಕನ್ನಡಿಗರ ಪರವಾಗಿ ಹೋರಾಟ ನಡೆಸಲು ಪ್ರೇರಣೆಯಾಗಿದ್ದಾರೆ
ಧಾರವಾಡ: ಮಹಾರಾಷ್ಟ್ರದ ಎಂ.ಇ.ಎಸ್. (ಮಹಾರಾಷ್ಟ್ರ ಏಕೀಕರಣ ಸಮಿತಿ) ಪುಂಡರು ಕರ್ನಾಟಕ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಹಾಗೂ ನಿರ್ವಾಹಕ (ಕಂಡಕ್ಟರ್) ಮೇಲೆ ಹಲ್ಲೆ ಮಾಡಿ ನಮ್ಮ ಬಸ್ ಗಳಿಗೆ ಕಪ್ಪು ಮಸಿ ಬಳಿದು, ಭಾರತ ದೇಶದ ಒಕ್ಕೂಟ ವ್ಯವಸ್ಥೆಯ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಭಾಷಾ ಸಮಸ್ಯೆಯನ್ನು ಸೃಷ್ಟಿಸಿ ಅಶಾಂತಿ ಉಂಟು ಮಾಡಿ, ಬಸ್ ನಿರ್ವಾಹಕನ ಮೇಲೆ ಸುಳ್ಳು ಪೋಕ್ಸೊ ಪ್ರಕರಣವನ್ನು ದಾಖಲಿಸಿದ್ದನ್ನು ತೀವ್ರವಾಗಿ ಖಂಡಿಸಿ ಧಾರವಾಡದಲ್ಲಿಂದು ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ ನಡೆಸಿತು.
ಭಾರತ ದೇಶವು ಹಲವು ರಾಜ್ಯಗಳಿಂದ ಕೂಡಿದ ಒಕ್ಕೂಟ ವ್ಯವಸ್ಥೆಯಿಂದ ನಿರ್ಮಾಣಗೊಂಡ ಹಾಗೂ ಪ್ರಪಂಚದಲ್ಲಿಯೇ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿದ ರಾಷ್ಟ್ರವಾಗಿದೆ. ನಮ್ಮ ದೇಶದ ಸಂವಿಧಾನವು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದ್ದು, ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇಲ್ಲಿ ಎಲ್ಲಾ ಜಾತಿ, ಧರ್ಮ, ಜನಾಂಗ, ಭಾಷೆ, ಪ್ರಾಂತೀಯತೆ ಇಂತಹ ಯಾವುದೇ ಭೇದ-ಭಾವಗಳನ್ನು ಮಾಡದೇ ಸೌಹಾರ್ಧಯುತ ಜೀವನವನ್ನು ಸಾಗಿಸುವ ಅವಕಾಶವನ್ನು ನಮ್ಮ ಸಂವಿಧಾನವು ಭಾರತೀಯರಿಗೆ ಕೊಟ್ಟಿದೆ.
ಇಂತಹ ಸಂದರ್ಭದಲ್ಲಿ ನಮ್ಮ ಕರ್ನಾಟಕದ ಕೆ.ಎಸ್.ಆರ್.ಟಿ.ಸಿ. ಬಸ್ ನಿರ್ವಾಹಕ ಹಾಗೂ ಚಾಲಕನ ಮೇಲೆ ಬಲವಂತವಾಗಿ ಎಂ.ಇ.ಎಸ್. ಪುಂಡರು ಹಲ್ಲೆ ನಡೆಸಿ ಮರಾಠಿ ಮಾತನಾಡು ಎಂದು ಬಲವಂತ ಮಾಡಿ ದೌರ್ಜನ್ಯ ಎಸಗಿರುವದನ್ನು ಜಯಕರ್ನಾಟಕ ಸಂಘಟನೆ ಉಗ್ರವಾಗಿ ಪ್ರತಿಭಟಿಸಿತು.
ಎಂ.ಇ.ಎಸ್. ಪುಂಡರು ಸೊಲ್ಲಾಪೂರ ಹಾಗೂ ಜಬ್ಬಲ್ಪುರದಲ್ಲಿ ಹಾಗೂ ಬಾಳೇಕುಂದ್ರಿಯಲ್ಲಿ ಕನ್ನಡಿಗ ಬಸ್ ನಿರ್ವಾಹಕ (ಕಂಡಕ್ಷರ) ಹಾಗೂ ಚಾಲಕರ ಮೇಲೆ ದೌರ್ಜನ್ಯವೆಸಗಿರುವದು ಹಾಗೂ ಸುಳ್ಳು ಪೋಕ್ಸೊ ಪ್ರಕರಣವನ್ನು ದಾಖಲಿಸಿದ್ದು, ಮಹಾರಾಷ್ಟ್ರ ಸರಕಾರ ಹಾಗೂ ಮಹಾರಾಷ್ಟ್ರ ಪೊಲೀಸರು ಶಾಂತಿ ಕದಡುವ ನಿಟ್ಟಿನಲ್ಲಿ ಇಂತಹ ಕೃತ್ಯ ಎಸಗಿದ ಈ ಪುಂಡರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವಂತೆ ನಮ್ಮ ಕರ್ನಾಟಕ ಸರಕಾರ, ಮಹಾರಾಷ್ಟ್ರ ಸರಕಾರದ ಮೇಲೆ ತೀವ್ರ ಒತ್ತಡ ಹೇರುವದರ ಜೊತೆಗೆ ಕೇಂದ್ರ ಗೃಹ ಸಚಿವಾಲಯ ಹಾಗೂ ಕೇಂದ್ರ ಗೃಹ ಸಚಿವರ ಮೇಲೆ ಒತ್ತಡ ಹಾಕುವಂತೆ ಆಗ್ರಹಪೂರ್ವಕವಾಗಿ ಒತ್ತಾಯಪಡಿಸಿತು.
ಘಟನೆಗೆ ಸಂಬಂಧಿಸಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಕನ್ನಡಪರ ಸಂಘಟನೆಗಳು ಬೆಳಗಾವಿಗೆ ಬರಬಾರದು ಎಂದು ಹೇಳಿರುವದು ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಅಲ್ಲದೇ ಬೆಳಗಾವಿಗೆ ಬರಬೇಡಿ ಎಂದು ಹೇಳಲು ಬೆಳಗಾವಿಯು ಅಮೇರಿಕಾದಲ್ಲಿ ಇದೆಯಾ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಅಲ್ಲದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಳರ್ ಅವರು ಕೂಡಾ ಮಹಾರಾಷ್ಟ್ರದ ಹಾಗೂ ಮರಾಠಿಗರ ಪರ ನಿಲುವು ಹೊಂದಿರುವದು ಕೂಡಾ ದುರದೃಷ್ಟಕರ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಖಂಡಿಸಿದರು.
ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ ಎಂ.ಇ.ಎಸ್ ಪುಂಡರ ಮೇಲೆ ಮಹಾರಾಷ್ಟ್ರ ಸರಕಾರ ಕೂಡಲೇ ಕಠಿಣ ಕ್ರಮಕೈಗೊಳ್ಳದಿದ್ದರೆ ನಮ್ಮ ಸಂಘಟನೆಯು ಸಾವಿರಾರು ಕಾರ್ಯಕರ್ತರು ಒಗ್ಗೂಡಿ ರಾಜ್ಯ ರಾಜಧಾನಿ ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ ಮತ್ತು ಒಂದು ವಾರದೊಳಗಾಗಿ ಈ ಕುರಿತು ತಾವು ಸೂಕ್ತ ಕ್ರಮವನ್ನು ಕೈಗೊಳ್ಳದೇ ಇದ್ದಲ್ಲಿ ಬೆಳಗಾವಿ ಜಿಲ್ಲೆಯ ಗಡಿಯನ್ನು ದಾಟಿ ಲಕ್ಷಾಂತರ ಸಂಖ್ಯೆಯಲ್ಲಿ ನಮ್ಮ ಸಂಘಟನೆ ಮಹಾರಾಷ್ಟ್ರ ಗಡಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ದುರ್ಗಪ್ಪ ಕಡೇಮನಿ, ಲಕ್ಷ್ಮಣ .ಬ. ದೊಡ್ಡಮನಿ, ರಾಜು ಜುನ್ನಾಯ್ಕರ, ಮಂಜುನಾಥ ಸುತಗಟ್ಟಿ, ನಾರಾಯಣ ಮಾದರ, ಶ್ರೀಕಾಂತ ತಳವಾರ, ಹನುಮಂತ ಮೊರಬ, ಶಬ್ಬಿರ ಅತ್ತಾರ, ಮುತ್ತು ಕುಲಕರ್ಣಿ,ಮಡಿವಾಳಪ್ಪ ನಡಕಟ್ಟಿ, ಪರಶುರಾಮ ದೊಡಮನಿ, ಇರ್ಫಾನ ಬೇಪಾರಿ, ವಿನೋದ ಕಾಳಿ, ಮಂಜುನಾಥ ಕಡೇಮನಿ, ರಾಕೇಶ ಜುನ್ನಾಯ್ಕರ, ರಾಜು ಚಲವಾದಿ, ಯೂಸುಫ್ ದೊಡವಾಡ, ಇಮಾಮಹುಸೇನ ಯಲಿಗಾರ, ಯಶವಂತ ದೊಡಮನಿ, ಪ್ರಜ್ವಲ ಚಿಕ್ಕೋಡಿ (ಮಾರ್ಕ), ಗಂಗಪ್ಪ ದೊಡಮನಿ, ಯಶವಂತ ದೊಡ್ಡಮನಿ ಗಿರೀಶ ಮೇಲಿನಮನಿ, ನಾಗರಾಜ ಕಡೇಮನಿ, ಅರುಣ ಕಾಳಿ ಎಲ್ಲಪ್ಪ ಹುಲ್ಲೂರು ನಾಗರಾಜ್ ಲಾಕರ್ ನಾಗರಾಜು ಲಡ್ಕರ್ ಪ್ರವೀಣ್ ಪೇತುನ್ನವರ್ ಕಿರಣ್ ಸಿಕ್ಕಲಗಾರ್ ಮಂಜುನಾಥ್ ಸಿಕ್ಕಲಿ ಮಂಜುನಾಥ್ ಭಜಂತ್ರಿ ಚಂದ್ರು ಅಂಗಡಿ ಬಸವರಾಜ್ ನಡಕಟ್ಟಿ ರಾಘವೇಂದ್ರ ಅನ್ವೇಕರ, ಪುನೀತ ಶಿರೂರು ಹರೀಶ್ ನಾಯಕ್ ಮಣಿಕಂಠ ಹವಾಲ್ದಾರ್ ದಯಾನಂದ ಉರುಕೊಡ ಭಾಗವಹಿಸಿದ್ದರು.