ಕೆಲಗೇರಿ ಕೆರೆ ಅಭಿವೃದ್ಧಿ ಮಾಡದ ಹಿನ್ನೆಲೆ “ಉಪಲೋಕಾಯುಕ್ತರಿಂದ ಸ್ವಮೋಟೊ ಪ್ರಕರಣ” ದಾಖಲು… ‘FIR’ ಯಾರ ಮೇಲೆ…!?

ಧಾರವಾಡ: ನಗರದ ಪ್ರಮುಖ ಕೆಲಗೇರಿ ಕೆರೆಯ ಪ್ರಮುಖ ಸಮಸ್ಯೆ ಬಗೆಹರಿಸದವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಲಾಗುವುದೆಂದು ಉಪಲೋಕಾಯುಕ್ತರಾದ ಕೆ.ಎನ್.ಫಣಿಂದ್ರ ಅವರು ತಿಳಿಸಿದರು.
ಬೆಳಿಗ್ಗೆ ಕೆಲಗೇರಿ ಕೆರೆಯ ದೂರಿನ ಹಿನ್ನೆಲೆ ಭೇಟಿ ನೀಡಿದ ರಾಜ್ಯದ ಉಪಲೋಕಾಯುಕ್ತರು, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿಯವರ ಉಪಸ್ಥಿತಿಯಲ್ಲಿ ದೂರು ದಾಖಲು ಮಾಡಿಕೊಳ್ಳುವ ಕುರಿತು ಹೇಳಿದರು.
ಎಕ್ಸಕ್ಲೂಸಿವ್ ವೀಡಿಯೋ…
20 ದಿನದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆಯನ್ನ ನೀಡಿರುವ ಬಗ್ಗೆಯೂ ಉಪಲೋಕಾಯುಕ್ತರು ತಿಳಿಸಿದರು. ಕೆರೆಯನ್ನ ಸರಿಯಾಗಿ ನೋಡಿಕೊಳ್ಳದ ಯಾರ್ಯಾರ ಮೇಲೆ ಪ್ರಕರಣ ದಾಖಲಾಗತ್ತೋ ಕಾದು ನೋಡಬೇಕಿದೆ.