Karnataka Voice

Latest Kannada News

ಹುಬ್ಬಳ್ಳಿ: “ಮುತ್ತು ಕೊಟ್ಟ ಆರೋಪ” ಹೆಡ್‌ಕಾನ್ಸಟೇಬಲ್ ಅಮಾನತ್ತು…!!!

ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯನ್ನ ಮನೆ ಬಾಗಿಲು ಹಾಕಿಕೊಂಡು ಮುತ್ತು ಕೊಟ್ಟ ಆರೋಪದಲ್ಲಿ ಬಂಧಿತರಾಗಿದ್ದ ಸಂಚಾರಿ ಠಾಣೆಯ ಮುಖ್ಯ ಪೇದೆಯನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.

ಅಲ್ಲಾಭಕ್ಷ್ಯ ಖಾದೀಮನವರ ಎಂಬ ಹೆಡ್‌ಕಾನ್ಸಟೇಬಲ್ ಕೇಶ್ವಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯೊಂದರ ಮನೆಯಲ್ಲಿ ಅನುಚಿತವಾಗಿ ವರ್ತಿಸಿದ್ದಾರೆಂದು ಸ್ಥಳೀಯರು, ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದರು.

ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಹೆಡ್‌ಕಾನ್ಸಟೇಬಲ್ ಅವರನ್ನ ಅಮಾನತ್ತು ಮಾಡಲಾಗಿದೆ.

Leave a Reply

Your email address will not be published. Required fields are marked *