Posts Slider

Karnataka Voice

Latest Kannada News

ಹುಬ್ಬಳ್ಳಿ- “ಮಾಸ್ಟರ್ ಮೈಂಡ್”- ಯುವರಾಜ ತಾಶೀಲದಾರ ರಾಷ್ಟ್ರಮಟ್ಟಕ್ಕೆ ಆಯ್ಕೆ…

Spread the love

ಮಾಸ್ಟರ್ ಮೈಂಡ್ ಅಬ್ಯಾಕಸ್ ಸ್ಪರ್ಧೆ- ಚಿನ್ನದ ಪದಕ ಪಡೆದ ಯುವರಾಜ್ ತಾಶೀಲದಾರ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಮದರ್ ಮ್ಯಾರಿ ಶಾಲೆಯ ವಿದ್ಯಾರ್ಥಿ ಯುವರಾಜ ತಾಶೀಲದಾರನ ಸಾಧನೆ

ಹುಬ್ಬಳ್ಳಿ: ನಗರದ ಮದರ್ ಮ್ಯಾರಿ ಶಾಲೆಯ ವಿದ್ಯಾರ್ಥಿ ಯುವರಾಜ ಶ್ರೀಕಾಂತ ತಾಶೀಲದಾರ 1ನೇ ರನ್ನರ್ ಅಪ್ ಪಡೆದು ಚಿನ್ನದ ಪದಕ ತನ್ನ ದಾಖಲಿಸಿಕೊಂಡಿದ್ದು, ಡಿಸೆಂಬರ್ ನಲ್ಲಿ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಮಾಸ್ಟರ್ ಮೈಂಡ್ ಅಬ್ಯಾಕಸ್ ಸ್ಪರ್ಧೆಗೆ ಆಯ್ಕೆ ಆಗಿದ್ದಾನೆ.

ಉಳಿದ 4 ವಿದ್ಯಾರ್ಥಿಗಳಾದ ಇತನ್ ಕಂಡಿ, ಪ್ರೀತಂ ಮುಗಳಿ, ಜ್ಯೋತಿ ಕುರಟ್ಟಿಮಠ, ದಕ್ಷ ಕೋಲಬಕರ ಚಿನ್ನದ ಪದಕ ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಮಾಸ್ಟರ್ ಮೈಂಡ್ ಅಬ್ಯಾಕಸ್ ಶಿಕ್ಷಕರಾದ ಸೈಮನ್ ಕಂಡಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಇದೇ ಅಕ್ಟೋಬರ್ ನಲ್ಲಿ ಮಾಸ್ಟರ್ ಮೈಂಡ್ ಅಬ್ಯಾಕಸ್ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ 5 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದಿದ್ದಾರೆ.

ಈ ಸ್ಪರ್ಧೆಯಲ್ಲಿ ಭಾರತದಾದ್ಯಂತ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆನಲೈನ್ ಅಬ್ಯಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದರು.


Spread the love

Leave a Reply

Your email address will not be published. Required fields are marked *