ಸಂಜಯ ಬಡಸ್ಕರ್- ಜಯತೀರ್ಥ ಕಟ್ಟಿ ನೇತೃತ್ವ: “ಹಳೇಹುಬ್ಬಳ್ಳಿ”ಯಲ್ಲಿ VHP ಪ್ರತಿಭಟನೆ…

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನ ಸರಕಾರ ಹಿಂದೆ ಪಡೆದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ನಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ವೀಡಿಯೋ…
ಘಟನೆ ನಡೆದ ಸ್ಥಳದಲ್ಲಿಯೇ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ಸಂಜಯ್ ಬಡಸ್ಕರ್ ನೇತೃತ್ವದಲ್ಲಿ ಹೋರಾಟವನ್ನ ಆರಂಭಿಸಲಾಯಿತು.
ಹಳೇ ಹುಬ್ಬಳ್ಳಿಯ ದಿಡ್ಡಿ ಹನುಮಂತ ದೇವಸ್ಥಾನದ ಪ್ರಮುಖ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟಿಸಿದರು.
ಸರ್ಕಾರದ ನಡೆಯನ್ನ ಹಿಂದೂಪರ ಕಾರ್ಯಕರ್ತರ ತೀವ್ರವಾಗಿ ಖಂಡಿಸಿದರು. ಜಯತೀರ್ಥ ಕಟ್ಟಿ, ಅಶೋಕ ಅಣವೇಕರ ಸೇರಿದಂತೆ ಹಲವರು ಭಾಗವಹಿಸಿದ್ದರು.