Posts Slider

Karnataka Voice

Latest Kannada News

“ಹು-ಧಾ ಬೈಪಾಸ್” ಉಂಡು ಹೋದ ಕಿತ್ಕೊಂಡು ಹೋದ… “ಕಣ್ಣಿಲ್ಲದಂತಾದ ಪೊಲೀಸರು”…!!!

1 min read
Spread the love

ಹುಬ್ಬಳ್ಳಿ: ನಗರದ ಹೊರವಲಯದ ಗಬ್ಬೂರಿನಿಂದ ಆರಂಭಗೊಂಡು ಧಾರವಾಡದ ನರೇಂದ್ರ ಕ್ರಾಸ್ ಬಳಿ ಸೇರುವ ಬೈಪಾಸ್, ಇದೀಗ ಯಾರೂ ಗತಿಯಿಲ್ಲದ ಅನಾಥ ಸ್ಥಿತಿಗೆ ಬಂದು ತಲುಪಿದ್ದು, ರಸ್ತೆಯುದ್ದಕ್ಕೂ ಹೆಣಗಳು ಬೀಳತೊಡಗಿವೆ. ಆದರೆ, ಅವುಗಳನ್ನ ಹಿಡಿಯಲು ಪೊಲೀಸರಿಗೆ ಯಾವುದೇ ಕುರುಹು ಸಿಗದಂತಾಗಿದೆ.

ಹೌದು… ಕಳೆದ ಸೆಪ್ಟೆಂಬರ್ 7ರಿಂದ ಬೈಪಾಸ್ ನೋಡಿಕೊಳ್ಳುತ್ತಿದ್ದ ಸಂಸ್ಥೆ, ಅಂದಿನಿಂದ ಹಣ ಸಂಗ್ರಹವನ್ನ ಸ್ಥಗಿತಗೊಳಿಸಿತು. ಹೋಗುವಾಗ ಬೈಪಾಸ್ ಉದ್ದಕ್ಕೂ ಹಾಕಲಾಗಿದ್ದ ಎಲ್ಲ ಸಿಸಿಟಿವಿಗಳನ್ನ ಬಿಟ್ಟು ಹೋಗಿದ್ದರು. ಆದರೆ, ಈಗ ಆರಂಭವಾಗಿರುವ ಕಾಮಗಾರಿಯವರು ಎಲ್ಲವನ್ನೂ ತೆಗೆದು ಹಾಕಿದ್ದಾರೆ. ಹಾಗಾಗಿ, ಇಂದು ಒಂದೇ ಒಂದು ಸಿಸಿಟಿವಿ ಇಲ್ಲ.

 

ಈಗ ಮೂರು ಘಟನೆಗಳು ನಡೆದು ಹಲವರು ಸಾವಿಗೀಡಾಗಿದ್ದಾರೆ. ಎಲ್ಲವೂ ಅಪರಿಚಿತ ವಾಹನಗಳೇ ಆಗಿವೆ. ಆದರೆ, ಅವುಗಳನ್ನ ಪತ್ತೆ ಹಚ್ಚಲು ಪೊಲೀಸರು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ.

ಪೊಲೀಸರು, ಹೆಣ ಹೊರುವ ಜೊತೆಗೆ ಇನ್ನೂ ಅಪರಿಚಿತ ವಾಹನದ ಬಗ್ಗೆಯೂ ಊರೂರು ಅಲೆಯುವ ಸ್ಥಿತಿ ಬಂದಿದೆ. ಆರಕ್ಷಕರು ಮನುಷ್ಯರು ಎಂಬ ಜ್ಞಾನವನ್ನಾದರೂ ಸಂಬಂಧಿಸಿದ ಇಲಾಖೆ ಹೊಂದಬೇಕಿದೆ. ಇಲ್ಲದಿದ್ದರೇ, ಅಪರಿಚಿತ ವಾಹನಗಳ “ಸಂಹಾರ” ನಡೆಯುತ್ತಲೇ ಇರುತ್ತದೆ ಮತ್ತೂ ಪೊಲೀಸರು ಊರುರು ಅಲೆಯುವುದೇ ಆಗತ್ತೆ.


Spread the love

Leave a Reply

Your email address will not be published. Required fields are marked *

You may have missed