Posts Slider

Karnataka Voice

Latest Kannada News

ಧಾರವಾಡ: ಬೈಕಿಂದ ಬಿದ್ದು ನರಳಾಡುತ್ತಿದ್ದ ಗಾಯಾಳುವಿಗೆ “ದಯಾ” ತೋರಿದ ಇನ್ಸಪೆಕ್ಟರ್…!!!

Spread the love

ಧಾರವಾಡ: ವೇಗವಾಗಿ ಬರುತ್ತಿದ್ದ ವೇಳೆಯಲ್ಲಿ ಬೈಕಿಂದ ಬಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ಸಾಗಿಸಿ, ಕರ್ತವ್ಯಪ್ರಜ್ಞೆಯ ಜೊತೆಗೆ ಮಾನವೀಯತೆಯನ್ನ ಮೆರೆದಿರುವ ಪ್ರಕರಣ ಧಾರವಾಡದಲ್ಲಿ ತಡರಾತ್ರಿ ನಡೆದಿದೆ.

ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂಬ ಮಾತನ್ನೂ ಹೇಳದ ಪೊಲೀಸ್ ಇನ್ಸ್‌ಪೆಕ್ಟರ್ ದಯಾನಂದ ಶೇಗುಣಿಸಿ, ಗಾಯಾಳುವನ್ನ ಆಸ್ಪತ್ರೆಗೆ ರವಾನೆ ಮಾಡಿ, ವೈದ್ಯರ ಬಳಿಯೂ ಹೋಗಿದ್ದಾರೆ.

ಎಕ್ಸಕ್ಲೂಸಿವ್ ವೀಡಿಯೋ…

ರಸ್ತೆಯಲ್ಲಿ ಬಿದ್ದಿದ್ದನ್ನ ನೋಡಿದ ದಯಾನಂದ ಅವರು, ಗಾಯಾಳುವನ್ನ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ನನ್ನ ವ್ಯಾಪ್ತಿಗೆ ಇದು ಬರಲ್ಲ ಎಂದು ಕಂಡು ಕಾಣದಂತೆ ಹೋಗುವವರ ನಡುವೆ ಇನ್ಸ್‌ಪೆಕ್ಟರ್ ದಯಾನಂದ ವಿಭಿನ್ನವಾಗಿ ನಡೆದುಕೊಂಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.


Spread the love

Leave a Reply

Your email address will not be published. Required fields are marked *