ಧಾರವಾಡದಲ್ಲಿ ಟ್ರ್ಯಾಕ್ಟರ್ ಚಲಾಯಿಸಿದ ಪೊಲೀಸ್ ಕಮೀಷನರ್ ಶಶಿಕುಮಾರ್…!!

ಧಾರವಾಡ: ನಗರದ ಹೆಬ್ಬಳ್ಳಿ ಅಗಸಿಯ ಶ್ರೀ ಗಣೇಶನ ವಿಸರ್ಜನೆಯ ಕಾರ್ಯಕ್ರಮವನ್ನ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಚಾಲನೆ ನೀಡಿದರು.
ಎಕ್ಸಕ್ಲೂಸಿವ್ ವೀಡಿಯೋ…
ಜನಸ್ನೇಹಿ ಪೊಲೀಸರೆಂದೇ ಗುರುತಿಸಿಕೊಳ್ಳುತ್ತಿರುವ ಹುಬ್ಬಳ್ಳಿ ಧಾರವಾಡ ಪೊಲೀಸರು, ಸದಾಕಾಲ ಜನರ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಇಂದು ಕೂಡಾ ಅಂತಹ ಘಟನೆಗೆ ಹೆಬ್ಬಳ್ಳಿ ಅಗಸಿ ಸಾಕ್ಷಿಯಾಯಿತು.
ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರ ಈ ನಡೆಯಿಂದ ಸಾರ್ವಜನಿಕರು ಸಾಕಷ್ಟು ಸಂತಸಗೊಂಡರು.