Posts Slider

Karnataka Voice

Latest Kannada News

ದೈಹಿಕ ಶಿಕ್ಷಕ ನಂದೀಶ ದಳವಾಯಿ ಸೇರಿ 21 ಶಿಕ್ಷಕರಿಗೆ ಧಾರವಾಡ ಜಿಲ್ಲೆಯ ಅತ್ಯುತ್ತಮ ಶಿಕ್ಷಕ‌ ಪ್ರಶಸ್ತಿ ಘೋಷಣೆ…!!!

1 min read
Spread the love

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 21 ಜನರ ಆಯ್ಕೆ

ಧಾರವಾಡ: ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಎಸ್. ಕೆಳದಿಮಠ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ವಿವಿಧ ಶಾಲೆಗಳ ಶಿಕ್ಷಕರನ್ನು 2024- 25ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಿರಿಯ ಪ್ರಾಥಮಿಕ ವಿಭಾಗ: ಧಾರವಾಡ ಶಹರದ ಕಾಮನಕಟ್ಟಿಯ ಶಾಲೆ, ನಂ. 14ರ ಪ್ರಭಾವತಿ ನಿಂಬನಗೌಡರ, ಧಾರವಾಡ ತಾಲೂಕಿನ ನರೇಂದ್ರ ಶಾಲೆಯ ಶೌಕತಲಲಿ ಮೆಣಸಗಿ, ಹುಬ್ಬಳ್ಳಿ ನೇಕಾರನಗರ ಶಾಲೆಯ ಲಕ್ಷ್ಮೀದೇವಿ ಕೊನಾ, ಹುಬ್ಬಳ್ಳಿ ತಾಲೂಕಿನ ಛಬ್ಬಿ ಶಾಲೆಯ ಅನ್ನಪೂರ್ಣಾ ಶಿರೂರು, ಕುಂದಗೋಳ ತಾಲೂಕಿನ ಹಿರೇಹರಕುಣಿ ಶಾಲೆಯ ಶ್ರೀದೇವಿ ಬಾಗೆವಾಡಿ, ಕಲಘಟಗಿ ತಾಲೂಕಿನ ಸೋಮನಕೊಪ್ಪ ಶಾಲೆಯ ಶಿವಪ್ಪ ಧನಿಗೊಂಡ ಹಾಗೂ ನವಲಗುಂದ ತಾಲೂಕಿನ ಕುಮಾರಗೊಪ್ಪ ಶಾಲೆಯ ರೇಣುಕಾ ಪಾತ್ರದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


ಹಿರಿಯ ಪ್ರಾಥಮಿಕ ವಿಭಾಗ: ಧಾರವಾಡ ಶಹರ ಗಾಂಧಿನಗರ ಶಾಲೆಯ ಬಸವರಾಜ ಗೊರವರ, ಧಾರವಾಡ ತಾಲೂಕಿನ ವರವನಾಗಲಾವಿಯ ಮಲ್ಲಮ್ಮ ಪಟ್ಟಿಟ್ಟಿ, ಹುಬ್ಬಳ್ಳಿ ಶಹರದ ನವನಂದನಗರ ಶಾಲೆಯ ವಿದ್ಯಾ ಧೋಂಗಡಿ, ಹುಬ್ಬಳ್ಳಿ ತಾಲೂಕಿನ ಗೋಪನಕೊಪ್ಪ ಶಾಲೆಯ ಅಣ್ಣಪ್ಪ ಮರಿಹುಚ್ಚಣ್ಣವರ, ಕುಂದಗೋಳ ತಾಲೂಕಿನ ಕೊಡ್ಲಿವಾಡ ಶಾಲೆಯ ಎಸ್.ಬಿ, ಕಬನೂರ, ಕಲಘಟಗಿ ತಾಲೂಕಿನ ಪರಸಾಪುರ ಶಾಲೆಯ ಅಶೋಕ ಖೋಡಕಿ, ನವಲಗುಂದ ತಾಲೂಕಿನ ಮಣಕವಾಡ ಶಾಲೆಯ ಮುಖ್ಯ ಶಿಕ್ಷಕ ಬಿ.ವಿ. ಅಂಗಡಿ ಆಯ್ಕೆಯಾಗಿದ್ದಾರೆ.

ಪ್ರೌಢ ವಿಭಾಗ: ಧಾರವಾಡ ಶಹರ ಗಾಂಧಿನಗರ ಶಾಲೆಯ ಎನ್‌.ಎಸ್‌. ಖವಟಿಕೊಪ್ಪ, ಧಾರವಾಡ ತಾಲೂಕಿನ ಹೆಬ್ಬಳ್ಳಿ ಶಾಲೆಯ ಸಂಜೀವ ಕುಂದಗೋಳ, ಹುಬ್ಬಳ್ಳಿ ಶಹರ ವಿಶ್ವೇಶ್ವರನಗರ ಶಾಲೆಯ ಎಸ್‌.ಆರ್. ಶೀಲವಂತರ, ಹುಬ್ಬಳ್ಳಿ ತಾಲೂಕಿನ ಗೋಕುಲದ ಶ್ರೀಗುರು ಗೋರಕ್ಷನಾಥ ಪ್ರೌಢಶಾಲೆ ದೈಹಿಕ ಶಿಕ್ಷಕ ನಂದೀಶ ಎನ್‌. ದಳವಾಯಿ, ಕುಂದಗೋಳ ತಾಲೂಕಿನ ಯರಗುಪ್ಪಿ ಶಾಲೆಯ ಸುಜಾತಾ ಪಾಳೇದ, ಕಲಘಟಗಿ ತಾಲೂಕಿನ ದೇವಿಕೊಪ್ಪ ಶಾಲೆಯ ನಾಗಪ್ಪ ಮನ್ನಿಕೇರಿ ಹಾಗೂ ನವಲಗುಂದ ತಾಲೂಕಿನ ಮಣಕವಾಡ ಶಾಲೆಯ ಶಿಲ್ಪಾ ಯಾಳಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *