ದೇವಪ್ಪಜ್ಜನ ಹತ್ಯೆಗೆ “250” ರೂಪಾಯಿಯ ಚಾಕು ಖರೀದಿ- “ಮಾಟ-ಮಂತ್ರ” ಭ್ರಮೆಯಿಂದ ಹತ್ಯೆ…!!! Exclusive Video…

ಹುಬ್ಬಳ್ಳಿ: ಈಶ್ವರನಗರದ ಶ್ರೀ ವೈಷ್ಣೋದೇವಿ ಮಂದಿರದ ಧರ್ಮಾಧಿಕಾರಿ ದೇವಪ್ಪಜ್ಜ ವನಹಳ್ಳಿಯವರ ಹತ್ಯೆ ಎರಡೂವರೆ ವರ್ಷದ ಹಿಂದೆ ಮಾಡಲು ಯತ್ನಿಸಿದ ದುರುಳನೇ, ಈಗ ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಪತ್ತೆಯಾಗಿದೆ.
ವಿದ್ಯಾನಗರದ ಮನೆಗೆ ನುಗ್ಗಿ ಚಾಕು ಇರಿಯಲು ಯತ್ನಿಸಿದ್ದವನಿಗೆ ಚಾಕು ಸಾಥ್ ನೀಡಿರಲಿಲ್ಲ. ಹಾಗಾಗಿಯೇ, ಹೊಸದೊಂದು ಚಾಕು ಖರೀದಿಸಿದ್ದ. ಈ ಬಗ್ಗೆ ಸ್ವತಃ ಪೊಲೀಸ್ ಕಮೀಷನರ್ ಎಸ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ ನೋಡಿ.
ಹುಬ್ಬಳ್ಳಿಯ ಕಮರಿಪೇಟೆಯ ಹಂತಕ ಸಂತೋಷ ಬೋಜಗಾರ, ತಾನು ಮಾಡಿದ್ದ ಬಹುದೊಡ್ಡ ಘನಂದಾರಿ ಕೆಲಸವೆಂಬಂತೆ ಹೇಳಿಕೊಂಡಿರುವ ವೀಡಿಯೋ ವೈರಲ್ ಆಗಿದೆ.
ತೀವ್ರ ಜಿಜ್ಞಾಸೆಗೆ ಕಾರಣವಾಗಿದ್ದ ಕೊಲೆ ಪ್ರಕರಣವೊಂದು ಬಯಲಿಗೆ ಬಂದಿದೆ. ಕುಸುಗಲ್ ಗ್ರಾಮದಲ್ಲಿ ದೇವಪ್ಪಜ್ಜನ ಅಂತ್ಯಕ್ರಿಯೆ ನಡೆದಿದೆ.