ಕಲಘಟಗಿ ಠಾಣೆ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ಟೀಂ ಭರ್ಜರಿ ಬೇಟೆ- ಹುಬ್ಬಳ್ಳಿಯ ನಾಲ್ವರು ಅಂದರ್…!!!

ಕಲಘಟಗಿ: ಗೋವಾದಿಂದ ಅಗ್ಗದ ಮದ್ಯವನ್ನ ತಂದು ಪ್ರತಿಷ್ಠಿತ ಕಂಪನಿಗಳ ಮದ್ಯವನ್ನ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನ ಪತ್ತೆ ಹಚ್ಚುವಲ್ಲಿ ಕಲಘಟಗಿ ಠಾಣೆ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ಅವರ ತಂಡ ಯಶಸ್ವಿಯಾಗಿದೆ.
ಹುಬ್ಬಳ್ಳಿ ಕಾರವಾರ ರಸ್ತೆಗಂಟಿಕೊಂಡ ಪಾಟೀಲರ ಗೋಡೌನದಲ್ಲಿ “ಕಮರಿಪೇಟೆ” ದಂಧೆ ಮಾಡುತ್ತಿದ್ದ ಮಾಹಿತಿ ಆಧರಿಸಿ ದಾಳಿ ನಡೆದಿದೆ.
ಆರೋಪಿಗಳ ಸಮೇತ ಪ್ರಕರಣದ ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ಅವರ ಕಾರ್ಯಕ್ಷಮತೆಯನ್ನ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶೈಲ ಬ್ಯಾಕೋಡ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಹಾಗೂ ಡಿಎಸ್ಪಿ ನಾಗರಾಜ ಅವರು ಮೆಚ್ಚಿ, ಬಹುಮಾನ ಘೋಷಣೆ ಮಾಡಿದ್ದಾರೆ.